Advertisement

ಕೋವಿಡ್ ನಿರ್ವಹಣೆ ಹಿನ್ನೆಲೆ ರಾಜ್ಯಗಳಿಗೆ ನೆರವು ನೀಡಿ : ಸೇನೆಗೆ ರಕ್ಷಣ ಸಚಿವರ ಸೂಚನೆ‌

11:51 PM Apr 20, 2021 | Team Udayavani |

ಹೊಸದಿಲ್ಲಿ: ಕೊರೊನಾ ನಿರ್ವಹಣೆ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು ಸೇನೆಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸೂಚಿಸಿದ್ದಾರೆ. ಈ ಬಗ್ಗೆ ಭೂಸೇನಾ ಮುಖ್ಯಸ್ಥ ಜ| ಎಂ.ಎಂ.ನರವಣೆ ಜತೆಗೆ ಕೂಡ ಮಾತುಕತೆ ನಡೆಸಿದ್ದಾರೆ ರಕ್ಷಣ ಸಚಿವ. ಹೀಗಾಗಿ, ವಿವಿಧ ರಾಜ್ಯಗಳಲ್ಲಿರುವ ಭೂಸೇನೆಯ ಆಯಾ ರಾಜ್ಯದ ಹಿರಿಯ ಅಧಿಕಾರಿಗೆ ಸೂಚನೆ ನೀಡಲಾಗಿದ್ದು, ಮುಖ್ಯಮಂತ್ರಿಗಳ ಜತೆಗೆ ಖುದ್ದಾಗಿ ಸಂಪರ್ಕ ಇರಿಸುವಂತೆ ಸೂಚಿಸಲಾಗಿದೆ.

Advertisement

ಇದೇ ವೇಳೆ, ಆಸ್ಪತ್ರೆಗಳಿಗೆ ತುರ್ತಾಗಿ ಬೇಕಾಗಿರುವ ಆಮ್ಲಜನಕ ಸಿಲಿಂಡರ್‌ಗಳನ್ನು ಹಾಗೂ ಆಸ್ಪತ್ರೆಗಳಿಗೆ ಬೇಕಾದ ಹಾಸಿಗೆಗಳನ್ನು ಸರಬರಾಜು ಮಾಡುವಂತೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರದ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಗಳಾದ ರಕ್ಷಣ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಆರ್ಡನ್ಸ್‌ ಆಫ್ ಫ್ಯಾಕ್ಟರಿ ಮಂಡಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ :ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ‌ ಕೈ’ ಎಂಬ ಸಂದೇಶ ನೀಡಿದೆ: ಸಿದ್ದರಾಮಯ್ಯ ಟೀಕೆ

ಪ್ರಧಾನಿ ಪ್ರವಾಸ ರದ್ದು: ಕೊರೊನಾ ಭೀಕರ ಸ್ವರೂಪ ತಾಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪೋರ್ಚ್‌ಗಲ್‌ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ನಿಗದಿಯಾಗಿದ್ದ ಫ್ರಾನ್ಸ್‌ ಪ್ರವಾಸವನ್ನೂ ಮುಂದೂಡಲಾಗಿದೆ. ಮೇ 8ರಂದು ಪ್ರಧಾನಿ ಪೋರ್ಚ್‌ಗಲ್‌ನಲ್ಲಿ 16ನೇ ಇಂಡಿಯಾ- ಯುರೋಪಿಯನ್‌ ಒಕ್ಕೂಟದ ಶೃಂಗದಲ್ಲಿ ಭಾಗಿಯಾಗಬೇಕಿತ್ತು. ಆದರೆ ಈ ಸಭೆಯನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next