Advertisement

ರಾಜೀವ್‌ ಹತ್ಯೆ ಪ್ರಕರಣ: ಬಾಂಬ್‌ ತಯಾರಿಕೆ ಸಂಚಿನ ತನಿಖೆಗೆ ಆದೇಶ

07:05 AM Aug 18, 2017 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಾಂಬ್‌ ತಯಾರಿಕೆಯ ಹಿಂದೆ ಇದ್ದ ಸಂಚಿನ ಕುರಿತಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚಿಸಿದೆ. 

Advertisement

ಬಾಂಬ್‌ ತಯಾರಿಸಿದ ಹಿಂದಿನ ಸಂಚಿನ ಬಗ್ಗೆ ಸರಿಯಾಗಿ ತನಿಖೆ ನಡೆಸಲಾಗಿಲ್ಲ ಎಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ಎ.ಜಿ. ಪೆರಾರಿವೇಲನ್‌ ಪರ ವಕೀಲರು ಹೇಳಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. 

1991ಮೇ 21ರಂದು ಶ್ರೀಪೆರಂಬದೂರಿನಲ್ಲಿ ಚುನಾವಣೆ ರ್ಯಾಲಿ ವೇಳೆ ಆತ್ಮಾಹುತಿ ಬಾಂಬರ್‌ ಸ್ಫೋಟಿಸಿಕೊಂಡು ರಾಜೀವ್‌ ಅವರ ಹತ್ಯೆ ನಡೆಸಲಾಗಿತ್ತು. ಪ್ರಕರಣದ ತನಿಖೆಯಲ್ಲಿ  ಸಿಬಿಐ ವಿಶೇಷ ದಳವಾಗಲಿ, ಇತರ ತನಿಖಾ ದಳಗಳಾಗಲಿ, ಬಾಂಬ್‌ ತಯಾರಿಕೆಯ ಹಿಂದಿನ ಸಂಚಿನ ಬಗ್ಗೆ ಸರಿಯಾಗಿ ತನಿಖೆ ನಡೆಸಿಲ್ಲ. ಇದರಲ್ಲಿ ಹಲವು ಉನ್ನತ ಸ್ತರದ ಜನರು ಭಾಗಿಯಾಗಿದ್ದಾರೆ ಎನ್ನುವುದು ಪೆರಾರಿವೇಲನ್‌ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಮರುತನಿಖೆ ನಡೆಸಿದರೇನು? ಇದಕ್ಕೆ ಉತ್ತರ ಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾ| ರಂಜನ್‌ ಗೊಗೋಯ್‌ ಅವರಿದ್ದ ಪೀಠ ಪ್ರಶ್ನಿಸಿದೆ. ಅಲ್ಲದೇ ತನಿಖೆ ನಡೆಸದೇ ಇರುವ ಬಗ್ಗೆ ಕೇಂದ್ರ ಮತ್ತು ಸಿಬಿಐನಿಂದ ಪ್ರತಿಕ್ರಿಯೆ ಬಯಸಿದೆ. ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next