ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ ಶ್ರೀಹರನ್ಗೆ ಖುದ್ದಾಗಿ ಪ್ರಕರಣ ವಾದಿಸುವ ಅವಕಾಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ಕಲ್ಪಿಸಿದೆ. ಸದ್ಯದಲ್ಲೇ ನಡೆಯಲಿರುವ ಪುತ್ರಿಯ ವಿವಾಹಕ್ಕಾಗಿ ಸಿದ್ಧತೆ ನಡೆಸಲು 6 ತಿಂಗಳ ಸಾಮಾನ್ಯ ರಜೆಯನ್ನು ನಳಿನಿ ಕೋರಿದ್ದಳು. ಜು.5ರಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಆ ದಿನ ಪೊಲೀಸರು ಭದ್ರತೆಯ ಜತೆಗೆ ಆಕೆಯನ್ನು ಕೋರ್ಟ್ಗೆ ಕರೆದೊಯ್ಯಬೇಕು ಎಂದು ಪೀಠ ಆದೇಶ ನೀಡಿದೆ. 27 ವರ್ಷಗಳಿಂದ ವೆಲ್ಲೂರಿನ ಜೈಲಿನಲ್ಲಿರುವ ನಳಿನಿ ಜೀವಾವಧಿ ಶಿಕ್ಷೆಯ ಕೈದಿಗಳಿಗೆ 2 ವರ್ಷಕ್ಕೆ ಒಮ್ಮೆ 1 ತಿಂಗಳ ಕಾಲ ರಜೆ ತೆಗೆದುಕೊಳ್ಳಲು ಅವಕಾಶ ಉಂಟು. 25 ವರ್ಷದಿಂದ ರಜೆ ಪಡೆದಿರುವುದರಿಂದ 6 ತಿಂಗಳು ರಜೆ ಬೇಕು ಎಂದು ಮನವಿ ಮಾಡಿದ ಪ್ರಕರಣವಿದು.
Advertisement
ವಾದ ಮಂಡನೆಗೆ ರಾಜೀವ್ ಹಂತಕಿಗೆ ಅವಕಾಶ
01:00 AM Jun 26, 2019 | mahesh |
Advertisement
Udayavani is now on Telegram. Click here to join our channel and stay updated with the latest news.