Advertisement

ರಜನಿಕಾಂತ್‌ ಅನಕ್ಷರಸ್ಥ,ಎಲ್ಲಾ ಮಾಧ್ಯಮಗಳ ಪ್ರಚಾರ!

11:31 AM Dec 31, 2017 | Team Udayavani |

ಚೆನ್ನೈ: ಹೊಸ ಪಕ್ಷ ಕಟ್ಟುವುದಾಗಿ ಭಾನುವಾರ ಘೋಷಿಸಿ ತಮಿಳು ನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿರುವಲರುವ ಸೂಪರ್‌ ಸ್ಟಾರ್‌  ರಜನಿಕಾಂತ್‌ ಅವರನ್ನು ಬಿಜೆಪಿ  ನಾಯಕ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಲೇವಡಿ ಮಾಡಿದ್ದು, ಅವರನ್ನು ಅನಕ್ಷರಸ್ಥ ಎಂದು ಜರಿದು ಸೂಪರ್‌ಸ್ಟಾರ್‌  ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Advertisement

ಎಎನ್‌ಐನೊಂದಿಗೆ ಮಾತನಾಡಿದ ಸ್ವಾಮಿ ‘ತಮಿಳುನಾಡಿನ ಜನರು ಬಹಳ ಬುದ್ಧಿವಂತರು. ರಜನಿ ಕಾಂತ್‌ ರಾಜಕೀಯ ಪ್ರವೇಶದಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಅವರು ಕೇವಲ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ  ಘೋಷಿಸಿದ್ದಾರೆ. ಯಾವುದೇ ದಾಖಲೆ ಮತ್ತು ವಿವರಗಳನ್ನು ನೀಡಿಲ್ಲ. ಅವರೊಬ್ಬ ಅನಕ್ಷರಸ್ಥ. ಎಲ್ಲಾ ಮಾಧ್ಯಮಗಳ ಪ್ರಚಾರ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next