Advertisement

ರಾಜಸ್ಥಾನ ಸಾರಿಗೆ ಬಸ್ಸು ಗಟಾರಕ್ಕೆ : 6 ಮಂದಿಗೆ ಗಾಯ; ಮೂವರು ಗಂಭೀರ

06:35 AM Feb 05, 2019 | Team Udayavani |

ಜೈಪುರ : ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಇಂದು ಮಂಗಳವಾರ ಗಟಾರಕ್ಕೆ ಉರುಳಿ ಬಿದ್ದ ಅವಘಡದಲ್ಲಿ ಕನಿಷ್ಠ ಆರು ಮಂದಿ ಪ್ರಯಾಣಿಕರು ಗಾಯಗೊಂಡರು.

Advertisement

ಜೈಪುರ ಜಿಲ್ಲೆಯ ಚಾಕ್ಸು ಪಟ್ಟಣದದಲ್ಲಿನ ಶೀತ್ಲಾ ಡ್ಯಾಮ್‌ ಬಳಿ ಎನ್‌ಎಚ್‌ 12ರಲ್ಲಿ ಈ ಅವಘಡ ಸಂಭವಿಸಿತು. 

ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಿದೆ. ಎಲ್ಲ ಪ್ರಯಾಣಿಕರನ್ನು ಅವಘಡ ಸ್ಥಳದಿಂದ ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಬಸ್ಸನ್ನು ಕೂಡ ಗಟಾರದಿಂದ ಮೇಲೆತ್ತಲಾಗಿದೆ ಎಂದು ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next