Advertisement

Rajasthan: ಓಂ ಆಕಾರದ ಶಿವ ದೇಗುಲದ ಪ್ರಾಣ ಪ್ರತಿಷ್ಠೆ ಸಂಪನ್ನ

12:44 AM Feb 20, 2024 | Team Udayavani |

ಜೈಪುರ: ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣಗೊಂಡ ಜಗತ್ತಿನ ಮೊದಲ “ಓಂ’ ಆಕಾರದ ಶಿವ ದೇಗುಲದ ಪ್ರಾಣ ಪ್ರತಿಷ್ಠೆಯನ್ನು ಸೋಮವಾರ ನೆರವೇರಿಸಲಾಗಿದೆ. ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರ ಉಪಸ್ಥಿತಿಯಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳು ನಡೆದಿವೆ. “ಇದು ಜಗತ್ತಿನ ಮೊದಲ ಓಂಕಾರ ದೇಗುಲವಾಗಿದ್ದು, ಇದರ ನಿರ್ಮಾಣಕ್ಕೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇಂದು ಭಾರತವನ್ನು ವಿಶ್ವ ಗುರು ಎಂದು ಕರೆಯುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿಯವರು’ ಎಂದು ಸಿಎಂ ಶರ್ಮಾ ಹೇಳಿದರು.

Advertisement

ದೇಗುಲದ ವೈಶಿಷ್ಟ್ಯ
1995- ಓಂ ಆಕಾರದ ಶಿವ ದೇಗುಲದ ನಿರ್ಮಾಣ ಆರಂಭ
4 – ದೇಗುಲದ ಅಂತಸ್ತು
250- ಎಕ್ರೆಯಲ್ಲಿ ನಿರ್ಮಾಣ
108- ದೇಗುಲದಲ್ಲಿ
ರುವ ಕಂಬಗಳು
1008- ಪ್ರತಿಮೆಗಳು

Advertisement

Udayavani is now on Telegram. Click here to join our channel and stay updated with the latest news.

Next