Advertisement

ರಾಜಸ್ಥಾನ: ಥಳಿಸಿ ಹತ್ಯೆ ; ಇಬ್ಬರಿಗೆ ಶಿಕ್ಷೆ

09:53 AM Mar 14, 2020 | Hari Prasad |

ಜೈಪುರ: 2017ರಲ್ಲಿ ರಾಜಸ್ಥಾನದಲ್ಲಿ ಥಳಿಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಹದಿಹರೆಯದ ಯುವಕರಿಗೆ ತಲಾ 3 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಇಬ್ಬರನ್ನೂ ಸುರಕ್ಷಿತ ಗೃಹದಲ್ಲಿರಿಸಬೇಕೆಂದು ಅಲ್ವಾರ್‌ ಬಾಲ ನ್ಯಾಯ ಮಂಡಳಿ ಹೇಳಿದೆ.

Advertisement

ಇದು 2017ರಲ್ಲಿ ನಡೆದಿದ್ದ ಪೆಹ್ಲುಖಾನ್‌ ಹತ್ಯೆ ಪ್ರಕರಣದಲ್ಲಿ ಜಾರಿಯಾದ ಮೊದಲ ಶಿಕ್ಷೆಯೆನ್ನುವುದು ಗಮನಾರ್ಹ. 2017, ಏ.1ರಲ್ಲಿ ಪೆಹ್ಲುಖಾನ್‌ ತನ್ನಿಬ್ಬರು ಪುತ್ರರೊಂದಿಗೆ ಜೈಪುರದಿಂದ ಹಸುವನ್ನು ಸಾಗಿಸುತ್ತಿದ್ದರು. ಆ ವೇಳೆ ಅಲ್ವಾರ್‌ನ ಬೆಹೊÅàರ್‌ನಲ್ಲಿ ಗೋರಕ್ಷಕರು ಗುಂಪಿನಲ್ಲಿ ಧಾವಿಸಿ ಬಂದು, ಪೆಹ್ಲು ಖಾನ್‌ ಮೇಲೆ ಹಲ್ಲೆ ಮಾಡಿದ್ದರು.

ಖಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 6 ಮಂದಿಯ ವಿರುದ್ಧ ದೂರು ದಾಖಲಾಗಿತ್ತು. ಆರಂಭದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲರನ್ನೂ ಖುಲಾಸೆ ಮಾಡಲಾಗಿತ್ತು. ಇದರ ವಿರುದ್ಧ ರಾಜಸ್ಥಾನ ಸರಕಾರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next