Advertisement

ಅಪ್ರಾಪ್ತೆ ಬಾಲಕಿ ಜತೆ ಪ್ರೇಮ ಸಂಬಂಧದ ಶಂಕೆ; ಯುವಕನನ್ನು ಥಳಿಸಿ ಕೊಂದ ಗುಂಪು

08:14 AM May 03, 2020 | Nagendra Trasi |

ರಾಜಸ್ಥಾನ್:ಅಪ್ರಾಪ್ತ ಬಾಲಕಿ ಜತೆ ಅಫೇರ್ ಇಟ್ಟುಕೊಂಡಿರುವ ಶಂಕೆಯ ಮೇಲೆ 28 ವರ್ಷದ ಯುವಕನನ್ನು ಗುಂಪೊಂದು ಹೊಡೆದು ಕೊಂದು ಹಾಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Advertisement

ಮೃತ ಯುವಕ ಧಿಂಡಾ ಗ್ರಾಮದ ನಿವಾಸಿಯಾಗಿದ್ದು ಅಶೋಕ್ ಗುರ್ಜರ್ (28ವರ್ಷ) ಎಂದು ಗುರುತಿಸಲಾಗಿದೆ ಎಂದು ಧೋಲಾಪುರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಛಾವಾ ತಿಳಿಸಿದ್ದಾರೆ.

ಮೃತ ಗುರ್ಜರ್ ಸಹೋದರ ನೀಡಿರುವ ದೂರಿನ ಪ್ರಕಾರ, ಬಂಟಿ ಮೀನಾ, ರಾಸಿನಿಂಗ್ ಮೀನಾ ಮತ್ತು ಖೋಕ್ಲಾ ಗ್ರಾಮದ ಇತರ ನಿವಾಸಿಗಳು ಗುರ್ಜರ್ ನನ್ನು ಅಪಹರಿಸಿದ್ದರು. ನಂತರ ಕಬ್ಬಿಣದ ಸರಳು ಮತ್ತು ದೊಣ್ಣೆಯಿಂದ ಥಳಿಸಿದ್ದರು. ಇದರಿಂದ ಆತನ ತಲೆಗೆ ಗಂಭೀರ ಗಾಯವಾಗಿರುವುದಾಗಿ ತಿಳಿಸಿದ್ದ.

ನಂತರ ಗುರ್ಜರ್ ನನ್ನು ಆನ್ ಗೈ ಪೊಲೀಸ್ ಚೌಕಿ ಸಮೀಪದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಏಪ್ರಿಲ್ 25ರಂದು ಸ್ಥಳೀಯರು ಗುರ್ಜರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದು, ಮನೆಯವರಿಗೆ ಸುದ್ದಿ ಮುಟ್ಟಿಸಿದ್ದರು. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ದೋಲ್ ಪುರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು. ಅಲ್ಲಿಂದ ಗ್ವಾಲಿಯರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಏ.30ರಂದು ಗುರ್ಜರ್ ಸಾವನ್ನಪ್ಪಿದ್ದ. ನಂತರ ಗುರ್ಜರ್ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೇಳಿಕೆಯನ್ನು ಪಡೆದುಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next