Advertisement

ರಾಜಸ್ಥಾನ ರಾಜಕೀಯ; ವಿಚಾರಣೆ ಸೋಮವಾರಕ್ಕೆ, ಪೈಲಟ್ ಅರ್ಜಿ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

05:47 PM Jul 17, 2020 | Nagendra Trasi |

ಜೈಪುರ್: ಸಚಿನ್ ಪೈಲಟ್ ಹಾಗೂ 18 ಮಂದಿ ಬಂಡಾಯ ಶಾಸಕರನ್ನು ಸ್ಪೀಕರ್ ಶೀಘ್ರವೇ ಅನರ್ಹಗೊಳಿಸಬಾರದು ಅಥವಾ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿರುವ ರಾಜಸ್ಥಾನ್ ಹೈಕೋರ್ಟ್ ಶಾಸಕತ್ವ ಅನರ್ಹಗೊಳಿಸುವ ವಿಚಾರಣೆಯನ್ನು ಜುಲೈ20ಕ್ಕೆ ಮುಂದೂಡಿದೆ.

Advertisement

ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ಸಚಿನ್ ಪೈಲಟ್ ಹಾಗೂ 18 ಮಂದಿ ಶಾಸಕರಿಗೆ ರಾಜಸ್ಥಾನ್ ವಿಧಾನಸಭಾ ಸ್ಪೀಕರ್ ಅನರ್ಹಗೊಳಿಸುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಿದ್ದರು. ಏತನ್ಮಧ್ಯೆ ಪೈಲಟ್ ಹಾಗೂ ಬಂಡಾಯ ಶಾಸಕರು ರಾಜಸ್ಥಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.

ಅಲ್ಲದೇ ಸ್ಪೀಕರ್ ಪೈಲಟ್ ಆಗಲಿ ಬಂಡಾಯ ಶಾಸಕರ ವಿರುದ್ಧವಾಗಲಿ ಜುಲೈ 21ರ ಸಂಜೆ 5.30ರವರೆಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಕಾಂಗ್ರೆಸ್ ಮುಖಂಡ ಅಭಿಷೇಕ್ ಮನುಸಿಂಘ್ವಿ ಸ್ಪೀಕರ್ ಕಚೇರಿ ಪರ ವಕೀಲರಾಗಿದ್ದು, ಹರೀಶ್ ಸಾಳ್ವೆ, ಮುಕುಲ್ ರೋಹ್ಟಗಿ ಕೇಂದ್ರದ ಪ್ರತಿನಿಧಿ ವಕೀಲರಾಗಿದ್ದಾರೆ. ಇವರಿಬ್ಬರು ಪೈಲಟ್ ಪರ ವಾದ ಮಂಡಿಸಲಿದ್ದಾರೆ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next