Advertisement

ರಾಜಸ್ಥಾನದಲ್ಲಿ ನಡೆದ ಪೈಶಾಚಿಕ ಘಟನೆಗೆ ಆರ್‌. ಅಶೋಕ್‌ ತೀವ್ರ ಆಕ್ರೋಶ

10:46 PM Jun 28, 2022 | Team Udayavani |

ಬೆಂಗಳೂರು: ಬಿಜೆಪಿಯ ಮಾಜಿ ವಕ್ತಾರರಿಗೆ ಬೆಂಬಲ ನೀಡಿದ ಎನ್ನುವ ಕಾರಣಕ್ಕೆ ಟೈಲರ್‌ ಒಬ್ಬನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕೆ ಕಂದಾಯ ಸಚಿವ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಇನ್ನು ನಡೆಯಬಾರದು,

ಅಂತಹ ಶಿಕ್ಷೆ ನೀಡಬೇಕು. ಈವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ದಲ್ಲಿ ಮಾತ್ರ ಇಂತಹ ಪ್ರಕರಣ ನಡೆಯುತ್ತಿತ್ತು. ಆದರೆ, ಈಗ ನಮ್ಮಲ್ಲಿಯೂ ಇಂತದ್ದು ನಡೆಯುತ್ತಿರುವುದು ದುರದೃಷ್ಟಕರ. ರಾಜಸ್ಥಾನ ಸರ್ಕಾರ ಯಾವುದು ಸಬೂಬು ಹೇಳದೆ ಕಾರ್ಯ ನಿರ್ವಹಿಸಬೇಕು.

ಕೇಂದ್ರ ಸರ್ಕಾರವು ಈ ಬಗ್ಗೆ ಖಂಡಿತ ಉಗ್ರ ಕ್ರಮ ಕೈಗೊಳ್ಳುತ್ತದೆ. ಇದು ಜನಸಾಮಾನ್ಯರು ಭಯ ಪಡುವಂತಹುದು. ಇಂತಹ ಹೇಯಕೃತ್ಯವನ್ನು ನಾನು ಖಂಡಿಸುತ್ತೇನೆ. ಮೃತರಿಗೆ ನ್ಯಾಯ ಸಿಗಲೇಬೇಕು ಎಂದು ಅಶೋಕ್‌ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next