Advertisement

ರಾಜಸ್ಥಾನ: ಕಾಂಗ್ರೆಸ್‌ ಶಾಸಕ ಪಾನಾ ಚಂದ್‌ ಮೆಘವಾಲ್‌ ರಾಜೀನಾಮೆ

11:23 PM Aug 15, 2022 | Team Udayavani |

ಜೈಪುರ: ಕುಡಿಯುವ ನೀರಿನ ಮಡಿಕೆಯನ್ನು ಸ್ಪರ್ಶಿಸಿದ ದಲಿತ ಬಾಲಕ ಶಿಕ್ಷಕನ ಥಳಿತದಿಂದ ಸಾವಿಗೀಡಾದ ಘಟನೆಯನ್ನು ಖಂಡಿಸಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜೀನಾಮೆಯನ್ನು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಕಳುಹಿಸಿಕೊಟ್ಟಿದ್ದು, ಕೆಲವು ವರ್ಷಗಳಿಂದ ದಲಿತರ ವಿರುದ್ಧ ರಾಜ್ಯದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ.

Advertisement

ದಲಿತ ಸಮುದಾಯವನ್ನು ರಕ್ಷಿಸಲು ಸಾಧ್ಯವಾಗದೆ ಇರುವುದರಿಂದ ಶಾಸಕನಾಗಿ ಮುಂದುವರಿ ಯುವ ಹಕ್ಕು ತನಗಿಲ್ಲ ಎಂದವರು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಪಾನಾ ಚಂದ್‌ ಮೆಘವಾಲ್‌ ರಾಜೀನಾಮೆ ನೀಡಿರುವ ಶಾಸಕ. ಅವರು ತನ್ನ ರಾಜೀನಾಮೆ ಪ್ರತಿಯನ್ನು ಸ್ಪೀಕರ್‌ ಅವರಿಗೂ ಕಳುಹಿಸಿ ಕೊಟ್ಟಿದ್ದಾರೆ. ಮಡಿಕೆಯಿಂದ ನೀರು ಕುಡಿಯುವುದು, ಮೀಸೆ ಇರಿಸಿ ಕೊಂಡಿರುವುದು, ಕತ್ತೆಯ ಮೇಲೆ ಸವಾರಿ ಮಾಡುವುದು ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ರಾಜಸ್ಥಾನದಲ್ಲಿ ದಲಿತರನ್ನು ಕೊಲ್ಲಲಾಗುತ್ತಿದೆ. ಇದರ ಬಗ್ಗೆ ಪೊಲೀಸರ ತನಿಖೆಯೂ ಹಳ್ಳ ಹಿಡಿಯುತ್ತಿದೆ ಎಂದು ಮೇಘವಾಲ್‌ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next