Advertisement

ಗಲಭೆ ತನಿಖೆಗೆ ಸಮಿತಿ ರಚಿಸಲಿ

11:31 PM May 05, 2022 | Team Udayavani |

ಜೈಪುರ: “ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ತಾಕತ್ತಿದ್ದರೆ ಏಳು ರಾಜ್ಯಗಳಲ್ಲಿ ನಡೆದ ಗಲಭೆ ಪ್ರಕರಣಗಳ ತನಿಖೆಗೆ ಸಮಿತಿ ರಚಿಸಲಿ. ಕರೌಲಿ ಮತ್ತು ಜೋಧ್‌ಪುರ ಗಲಾಟೆ ಪ್ರಕರಣಗಳು ಸಣ್ಣ ವಿಚಾರ’ ಹೀಗೆಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

Advertisement

ಜೈಪುರದಲ್ಲಿ ಗುರುವಾರ ಮಾತನಾಡಿದ ಅವರು, ಕರೌಲಿಯಲ್ಲಿನ ಘಟನೆ ಒಂದು ಪ್ರಯೋಗ ಎಂದು ಬಣ್ಣಿಸಿದ್ದಾರೆ. ಅದೇ ಮಾದರಿಯಲ್ಲಿ ಏಳು ರಾಜ್ಯಗಳಲ್ಲಿ ಘಟನೆಗಳು ನಡೆದಿವೆ. ಅವುಗಳ ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮಿತಿ ರಚಿಸಲಿ ಎಂದು ಸವಾಲು ಹಾಕಿದ್ದಾರೆ ಗೆಹ್ಲೋಟ್‌.

ಮತ್ತೂಂದು ಗಲಾಟೆ: ರಾಜಸ್ಥಾನದ  ಭಿಲ್ವಾರಾದ ಸಾಂಗನೇರ್‌ ಎಂಬಲ್ಲಿ  ಅಹಿತಕರ ಘಟನೆ ನಡೆದಿದೆ. ಒಂದು ಕೋಮಿನ ಇಬ್ಬರು ಯುವಕರಿಗೆ ಎಂಟು ಮಂದಿ ಇದ್ದ ಗುಂಪು ಬುಧವಾರ ರಾತ್ರಿ ಥಳಿಸಿದೆ. ಜತೆಗೆ ಒಂದು ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಕೂಡಲೇ ಜಿಲ್ಲಾಡಳಿತ ಹೆಚ್ಚುವರಿ ಪೊಲೀಸರನ್ನು ಕರೆತಂದು ಬಂದೋಬಸ್ತ್ ಏರ್ಪಡಿಸಿದೆ.

ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಸ್ಥಗಿತಗೊಳಿಸಿ, ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇನ್ನೊಂದೆಡೆ ಜೋಧ್‌ಪುರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು 211ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next