Advertisement

ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಅಪರಾಧಿಗೆ ಮರಣ ದಂಡನೆ ಶಿಕ್ಷೆ

10:08 AM Jun 13, 2019 | Team Udayavani |

ಜೈಪುರ : 2015ರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಆಕೆಯ ಮುಖವನ್ನು ಜಜ್ಜಿ, ಗುಪ್ತಾಂಗವನ್ನು ಛಿದ್ರಗೊಳಿಸಿ ಕೊಂದಿದ್ದ ಆರೋಪಿಯ ಅಪರಾಧವು ‘ಅಪರೂಪದಲ್ಲೇ ಅಪರೂಪದ ಕೃತ್ಯ’ ವಾಗಿದೆ ಎಂದು ಹೇಳಿರುವ ರಾಜಸ್ಥಾನದ ಅಲ್ವಾರ್‌ ಜಿಲ್ಲೆಯ ನ್ಯಾಯಾಲಯ ಇಂದು ಬುಧವಾರ ಆರೋಪಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.

Advertisement

ಬೆಹರೂರ್‌ ಪಟ್ಟಣದ ರೇವಾಲಿಯ ನಿವಾಸಿಯಾಗಿರುವ ರಾಜಕುಮಾರ್‌ ಅಲಿಯಾಸ್‌ ಧರ್ಮೇಂದ್ರ ಯಾದವ್‌ ನನ್ನು ಬಾಲಕಿಯ ಅತ್ಯಾಚಾರ ಮತ್ತು ಅತ್ಯಮಾನುಷ ಕೊಲೆ ಕೃತ್ಯಕ್ಕಾಗಿ ಪೋಕ್‌ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಶರ್ಮಾ ನನ್ನು ಅಪರಾಧಿ ಎಂದು ಘೋಷಿಸಿ ಮರಣ ದಂಡನೆ ವಿಧಿಸಿದರು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿನೋದ್‌ ಕುಮಾರ್‌ ಶರ್ಮಾ ಮಾಧ್ಯಮಕ್ಕೆ ತಿಳಿಸಿದರು.

ಐಪಿಸಿ ಸೆ.302 (ಕೊಲೆ), 363 (ಅಪಹರಣ) ಮತ್ತು ಸೆ.376 (ಕೊನೆಯ ಉಸಿರಿನ ತನಕವೂ ಅನುಭವಿಸುವ ಜೈಲು ಶಿಕ್ಷೆ ) ಅಡಿ ಆರೋಪಿ ರಾಜ್‌ಕುಮಾರ್‌ ನನ್ನು ಅಪರಾಧಿ ಎಂದು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next