Advertisement

ರಾಜಾ ಕೊಲೆ ಪ್ರಕರಣ: 9 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

10:35 PM Jun 12, 2022 | Team Udayavani |

ಪಣಂಬೂರು : ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರಾಜ ಯಾನೆ ರಾಘವೇಂದ್ರ ಎಂಬಾತನನ್ನು ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಗಳಿಗೆ ಕೊಲೆ ಕೃತ್ಯಕ್ಕೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿ ಸಹಕರಿಸಿರುವ 9 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Advertisement

ಆರೋಪಿಗಳಾದ ಸುರತ್ಕಲ್‌ನ ಇಡ್ಯಾದ ಸಂದೀಪ್‌ ಯಾನೆ ಚೊಟ್ಟೆ ಸಂದೀಪ್‌ (45), ಕೃಷ್ಣಾಪುರದ ಸಂದೀಪ್‌ ದೇವಾಡಿಗ ಯಾನೆ ಸ್ಯಾಂಡಿ ( 32),ತಡಂಬೈಲ್‌ನ ಲಿಖೀತ್‌ ಪ್ರಾಯ(31) , ತೋಟಬೇಂಗ್ರೆಯ ದೀಕ್ಷಿತ್‌ ಯಾನೆ ಕಕ್ಕೆ ದೀಕ್ಷಿತ್‌ (23), ಮೀನಕಳೀಯಾ ತುಷಾರ್‌ ಅಮೀನ್‌ (30), ಪಂಜಿಮೊಗರು, ಕೂಳೂರಿನ ವಿನೋದ್‌ ಕುಮಾರ್‌ (32 ), ಬಜ್ಪೆಯ ಲತೇಶ್‌ ಜೋಗಿ (27), ಬೈಕಂಪಾಡಿ ಸಂದೀಪ್‌ ಪುತ್ರನ್‌ (36), ಕಾವೂರು ಮೂಡುಶೆಡ್ಡೆಯ ಅಕ್ಷಿತಾ (28)ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ : ನನ್ನ ಕೊಂದುಬಿಡಿ: ಮಾಧ್ಯಮದ ಎದುರು ಕಣ್ಣೀರಿಟ್ಟ ಸ್ವಪ್ನಾ ಸುರೇಶ್‌

Advertisement

Udayavani is now on Telegram. Click here to join our channel and stay updated with the latest news.

Next