Advertisement

NDAಗೆ ಬೇಷರತ್ ಬೆಂಬಲ ಘೋಷಿಸಿದ MNS ರಾಜ್ ಠಾಕ್ರೆ

09:51 PM Apr 09, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಗೆ ಬೇಷರತ್ ಬೆಂಬಲವನ್ನು ಘೋಷಿಸಿದ್ದಾರೆ.

Advertisement

ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ನಾಯಕತ್ವವನ್ನು ಭೇಟಿಯಾದ ಫೈರ್‌ಬ್ರಾಂಡ್ ನಾಯಕ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೇ ಕಾರ್ಯಕರ್ತರಿಗೆ ಮೋದಿ ಪರವಾಗಿ ಕೆಲಸ ಆರಂಭಿಸಲು ಕರೆ ನೀಡಿದ್ದಾರೆ.

“30 ವರ್ಷಗಳ ನಂತರ, ಒಬ್ಬ ವ್ಯಕ್ತಿ ಪೂರ್ಣ ಬಹುಮತದಿಂದ ಆಯ್ಕೆಯಾದರು, ನಿಮಗೆ ನೆನಪಿದ್ದರೆ, ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಬೇಕು ಎಂದು ಬಿಜೆಪಿಗಿಂತ ಮೊದಲು ಹೇಳಿದ ವ್ಯಕ್ತಿ ನಾನಾಗಿದ್ದೆ. ಆರ್ಟಿಕಲ್ 370 ವಿಚಾರಕ್ಕಾಗಿನಾನು ಅವರನ್ನು ಹೊಗಳಿದ್ದೇನೆ ಎನ್‌ಆರ್‌ಸಿಗಾಗಿ ಮೋರ್ಚಾವನ್ನು ಸಹ ಮುನ್ನಡೆಸಿದ್ದೆ ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next