Advertisement

ರೈತ ವಿದ್ಯಾನಿಧಿ: ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದ ಸಿಎಂ; ಕಾಂಗ್ರೆಸ್

11:19 AM Nov 25, 2021 | Team Udayavani |

ಬೆಂಗಳೂರು : ರೈತ ವಿದ್ಯಾನಿಧಿ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಕಾಂಗ್ರೆಸ್ ಸರಕಾರದ ಯೋಜನೆ ಖಾಲಿ ಡಬ್ಬ ಎಂದು ಟೀಕಿಸಿ ಗುರುವಾರ ಟ್ವೀಟ್ ಮಾಡಿದೆ.

Advertisement

ಕೆಪಿಸಿಸಿ ಮಾಡಿದ ಟ್ವೀಟ್ ನಲ್ಲಿ ”ಸಿಎಂ ಅಬ್ಬರದೊಂದಿಗೆ ಘೋಷಿಸಿದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ಅರ್ಜಿ ಹಾಕುವ ವ್ಯವಸ್ಥೆಯೇ ಇಲ್ಲ, ಸಾಮಾನ್ಯ ವರ್ಗದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ.ಹೀಗಾಗಿ ಇದುವರೆಗೂ ಕೇವಲ 16 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ದೊರಕಿದೆ!. ಬೊಮ್ಮಾಯಿಯವರೇ, ಇಂತಹ ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದಿರಲ್ಲವೇ!?” ಎಂದು ಬರೆದಿದೆ.

ಸಿಎಂ ರೈತ ವಿದ್ಯಾನಿಧಿ ಕಾಗದದ ಕುಸುಮ, ಬಿಜೆಪಿಯ ಪ್ರಚಾರ ಆನೆಯಷ್ಟು, ಕೆಲಸ ಇರುವೆಯಷ್ಟು ಎಂದು ಪೋಸ್ಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next