Advertisement

ಇಚ್ಲಂಪಾಡಿ; ಒಕ್ಕಲಿಗ ಗೌಡ ಗ್ರಾಮ ಸಮಿತಿಯಿಂದ 125 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

05:26 PM Apr 08, 2020 | mahesh |

ಕಲ್ಲುಗುಡ್ಡೆ; ಇಚ್ಲಂಪಾಡಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ಗ್ರಾಮದ ಸುಮಾರು 125 ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಬುಧವಾರ ವಿತರಿಸಲಾಯಿತು.

Advertisement

ಗ್ರಾಮ ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಗೌಡ ಒಡ್ಯತಡ್ಕ ಮಾತನಾಡಿ, ಭಾರತ್ ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದ್ದು, ಅವರಿಗೆ ನೆರವಾಗುವ ದೃಷ್ಟಿಯಿಂದ ಗ್ರಾಮದ ಆಯ್ದ ಕುಟುಂಬಕ್ಕೆ ಸಮಿತಿ ವತಿಯಿಂದ ಸಾಮಗ್ರಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಯಾರೂ ಕಷ್ಟದ ಜೀವನ ನಡೆಸಬಾರದೆಂಬ ಉದ್ದೇಶ ನಮ್ಮದು ಎಂದು ಅವರು ತಿಳಿಸಿದರು. ಇಚ್ಲಂಪಾಡಿ ಬೀಡಿನ ಪೆರ್ಗಡೆ ಶುಭಾಕರ ಹೆಗ್ಗಡೆ ಅವರು ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.

ಆಹಾರ ಸಾಮಾಗ್ರಿ ಕಿಟ್ ನಲ್ಲಿ 10 ಕೆ.ಜಿ. ಅಕ್ಕಿ, 2 ಕೆ.ಜಿ. ಸಕ್ಕರೆ, ಕಾಲು ಕೆ.ಜಿ. ಚಹಾಹುಡಿ, 1 ಕೆ.ಜಿ. ಉಪ್ಪು, ಕಾಲು ಕೆ.ಜಿ. ಉಪ್ಪಿನಕಾಯಿ ಅಗತ್ಯ ಸಾಮಾಗ್ರಿಗಳನ್ನು ವ್ಯವಸ್ಥೆ ಮಾಡಲಾಯಿತು.  ಗ್ರಾ.ಪಂ. ಉಪಾಧ್ಯಕ್ಷೆ ವಾಣಿ, ಸದಸ್ಯರಾದ ಮೋಹಿನಿ, ಶ್ರೀನಿವಾಸ, ಮಾಧವ, ಪಿ.ವಿ.ಅನ್ನಮ್ಮ, ಪ್ರಮುಖರಾದ ಮಾಯಿಲಪ್ಪ ಶೆಟ್ಟಿ, ರಾಮಕೃಷ್ಣ ಗೌಡ ಕೊರಮೇರು, ದಿನೇಶ್ ಗೌಡ, ವಿಶ್ವನಾಥ ಗೌಡ ಕೊರಮೇರು,ಅನಿಲ್ ಉಮೆಸಾಗು, ರಾಧಾಕೃಷ್ಣ ಕೆರ್ನಡ್ಕ, ಕೇಶವ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next