Advertisement

ಕೊಡಗಿನಲ್ಲಿ ಮಳೆ ಕ್ಷೀಣ ಮುಂದುವರಿದ ಪ್ರವಾಹ ಆತಂಕ

02:29 AM Aug 12, 2019 | sudhir |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರವಿವಾರ ಮಳೆ ಕ್ಷೀಣವಾಗಿ ನದಿಗಳ ನೀರಿನ ಮಟ್ಟ ಇಳಿಮುಖಗೊಂಡಿದ್ದರೂ ಆತಂಕದ ವಾತಾವರಣ ಮುಂದುವರಿದಿದೆ.

Advertisement

ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರವಾಹ ಇಳಿಮುಖವಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹದ ಮಟ್ಟ ಇಳಿದಿದೆಯಾದರೂ ಇನ್ನೂ ಸಂಚಾರ ಸುಗಮವಾಗಿಲ್ಲ.

ಬರೆ ಕುಸಿತದ ಆತಂಕ

ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಬರೆ ಕುಸಿತವಾಗಿದ್ದು, ಮಳೆಯ ಪ್ರಮಾಣ ಹೆಚ್ಚಾದಲ್ಲಿ ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಿದೆ. ಕುಶಾಲನಗರ, ಕೊಪ್ಪ ವ್ಯಾಪ್ತಿಯಲ್ಲಿ ಕಾವೇರಿಯ ಪ್ರವಾಹದ ಅಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಕುಶಾಲನಗರದಲ್ಲಿ ರವಿವಾರವೂ ರಾ. ಹೆ.ಬಂದ್‌ ಅಗಿತ್ತು. ಕೂಪ್ಪ, ಕುಶಾಲನಗರ ಕಡೆಗೆ ಬರುವ ಜನರನ್ನು ಬೋಟ್ ಮೂಲಕ ಸಾಗಿಸಲಾಗುತ್ತಿದೆ. ತಾವರೆಕರೆ ರಸ್ತೆ ಮೇಲೆ ನೀರು ನಿಂತಿ ದ್ದರೂ ಚಾಲಕನೊಬ್ಬ ಬಸ್‌ನ್ನು ದಾಟಿಸಲು ಮುಂದಾಗಿ ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಕುಶಾಲ ನಗರ -ಮೈಸೂರು ರಸ್ತೆ, ಕೂಡಿಗೆ – ಕಣಿವೆ ರಸ್ತೆ, ಕುಶಾಲನಗರ- ಹೆಬ್ಟಾಲೆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next