Advertisement

ಗ್ರಾಮಕ್ಕೆ ನುಗ್ಗಿದ ಮಳೆ ನೀರು: 150 ಮನೆಗೂ ನೀರಿನಲ್ಲಿ ಜಲಾವೃತ

09:42 AM Oct 08, 2019 | Hari Prasad |

ಕುಷ್ಟಗಿ: ತಾಲೂಕಿನ ನಿಡಶೇಷಿ ವ್ಯಾಪ್ತಿಯಲ್ಲಿ ಸುರಿದ ಧಾರಕಾರ ಮಳೆಗೆ ನಾಲೆಯ ನೀರು ನಿಡಶೇಷಿ ಗ್ರಾಮಕ್ಕೆ ನುಗ್ಗಿದ್ದರಿಂದ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

Advertisement

ಗ್ರಾಮದ ಹೊರವಲಯದಲ್ಲಿ ನಾಲೆಗೆ ಕಿರು ಸೇತುವೆ ಪೈಪ್ ಅಳವಡಿಸಲಾಗಿತ್ತು. ಧಾರಕಾರ ಮಳೆಯಿಂದ ಪೈಪಿನ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನೀರು ಗ್ರಾಮದೊಳಗೆ ನುಗ್ಗಿದೆ.


ಏಕಾ ಏಕಿ ನೆರೆ ನೀರು ಬಂದ ಕಾರಣ ಈ ಭಾಗದ ಜನರು ಭಯಭೀತರಾದರು. ಇದೀಗ ತೋಟಗಾರಿಕಾ ಇಲಾಖೆಯ ಫಾರ್ಮ್ ಆವರಣದ ಗೋಡೆ ಒಡೆದು ನೀರು ಬೇರೆ ಕಡೆ ಹರಿದು ಹೋಗುವ ವ್ಯವಸ್ಥೆ ಮಾಡಿರುವುದರಿಂದ ಗ್ರಾಮದೊಳಗೆ ನೀರು ನುಗ್ಗುವ ಪ್ರಮಾಣ ಕಡಿಮೆಯಾಗಿದೆ.

ಘಟನಾ ಸ್ಥಳಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next