Advertisement

Rain ಉಡುಪಿ ಜಿಲ್ಲೆ: ಹಲವೆಡೆ ಉತ್ತಮ ಮಳೆ

11:23 PM Jun 22, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ, ಶನಿವಾರ ಹಲವೆಡೆ ಉತ್ತಮ ಮಳೆ ಸುರಿದಿದೆ. ಉಡುಪಿ, ಬೈಂದೂರು ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಮಳೆಯಾಗಿದೆ.

Advertisement

ಶನಿವಾರ ಮಲ್ಪೆ, ಮಣಿಪಾಲ, ಉಡುಪಿ, ಹಿರಿಯಡಕ, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಸಿಲು ಮೋಡ ವಾತಾವರಣದ ನಡುವೆ ಕೆಲಕಾಲ ಉತ್ತಮ ಮಳೆಯಾಗಿದೆ.

ಮಳೆ ಗಾಳಿಗೆ ಹಲವೆಡೆ ಮನೆಗಳಿಗೆ ಹಾನಿ ಆಗಿದ್ದು, ವಿದ್ಯುತ್‌ ಪೂರೈಕೆ ಯಲ್ಲೂ ವ್ಯತ್ಯಯ ಉಂಟಾಗಿತ್ತು. ಬೆಳಪು ಜಾನಕಿ ದೇವಾಡಿಗ, ಇನ್ನಂಜೆ ಲಕ್ಷ್ಮೀ ಹರೀಶ್ಚಂದ್ರ, ಗಂಗೊಳ್ಳಿ ಸಂಜೀವ್‌ ಪಾಟೇಲ್‌, ಅನಹಳ್ಳಿ ಚೆನ್ನಕೇಶವ ಭಟ್‌, ಉಪ್ಪುಂದ ಕೃಷ್ಣ ಅವರ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ 32.06, ಕುಂದಾ ಪುರ 23.8, ಉಡುಪಿ 44.1, ಬೈಂದೂರು 65.0, ಬ್ರಹ್ಮಾವರ 44.3, ಕಾಪು 28.2, ಹೆಬ್ರಿ 11.4 ಮಿ. ಮೀ. ಮಳೆಯಾಗಿದೆ.

ದ.ಕ. ಜಿಲ್ಲೆಯ ಕೆಲವೆಡೆ ಮಳೆ: 3 ದಿನ ಬಿರುಸು ಮಳೆ ನಿರೀಕ್ಷೆ
ಮಂಗಳೂರು: ಬಂಗಾಲಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆಯುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆಯು ಜೂ.23ರಂದು “ರೆಡ್‌ ಅಲರ್ಟ್‌’ ಘೊಷಿಸಿದೆ.

ಜೂ.24ರಿಂದ 26ರ ವರೆಗೆ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

Advertisement

ಮಂಗಳೂರು ನಗರ ಸಹಿತ ದ. ಕ. ಜಿಲ್ಲೆಯಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಮತ್ತು ಸಂಜೆ ಮಳೆ ಆಗಾಗ್ಗೆ ಮಳೆ ಸುರಿದಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿತ್ತು. ಕರಾವಳಿ ಭಾಗದಲ್ಲಿ ಜೂ.22 ರಂದು ಭಾರತೀಯ ಹವಾಮಾನ ಇಲಾಖೆಯು “ರೆಡ್‌ ಅಲರ್ಟ್‌’ ಘೋಷಿಸಿತ್ತು. ಆದರೂ ಜಿಲ್ಲೆಯಲ್ಲಿ ದಿನವಿಡೀ ಬಿರುಸಿನ ಮಳೆಯಾಗಿಲ್ಲ.

ಮಂಗಳೂರಿನಲ್ಲಿ 29. ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.4 ಡಿ.ಸೆ. ಮತ್ತು 22.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ಕಡಿಮೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next