Advertisement

ಮಳೆ ಮುಂದುವರಿಕೆ: ಸಂಕಷ್ಟದಲ್ಲಿ ಬೆಳೆಗಾರರು

02:17 PM Nov 08, 2021 | Team Udayavani |

ಸಕಲೇಶಪುರ: ದೀಪಾವಳಿ ಹಬ್ಬ ಮುಗಿದು ನ. 2ನೇ ವಾರಕ್ಕೆ ಕಾಲಿಟ್ಟಿದ್ದರೂ ಹವಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲೂಕಿನ ಕಾμ ಬೆಳೆಗಾರರ ವಲಯದಲ್ಲಿ ಆತಂಕ ಹುಟ್ಟಿದೆ.

Advertisement

ಕಳೆದೆರಡು ವರ್ಷಗಳಿಂದ ಹವಮಾನ ವೈಪರೀತ್ಯ ದಿಂದ ಮಳೆ ಸುರಿಯುವುದರಲ್ಲಿ ವ್ಯತ್ಯಾಸವಾಗು ತ್ತಿರುವುದು ಕಂಡು ಬಂದಿದ್ದರೂ, ಈ ವರ್ಷದಷ್ಟು ಗಂಭೀರ ಪರಿಸ್ಥಿತಿ ಕಂಡು ಬಂದಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್‌ ಹಾಗೂ ನವೆಂಬರ್‌ ಮಾಹೆಯಲ್ಲಿ ಅರೇ ಬಿಕಾ ಕಾಫಿ ಕೊಯ್ಲು ಬರುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮಳೆ ನಿರಂತರವಾಗಿ ಸುರಿಯು ತ್ತಿರುವುದರಿಂದ ಈಗಾಗಲೆ ಶೇ.25ರಷ್ಟು ಅರೇಬಿಕಾ ಕಾಫಿ ನೆಲದ ಪಾಲಾಗಿದೆ. ಬಾಕಿ ಉಳಿದ ಕಾಫಿ ಯನ್ನು ಕೊಯ್ಲು ಮಾಡಲು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.

ಕಾಫಿ ಬೆಳೆ ರಕ್ಷಣೆ ಅಸಾಧ್ಯ ಮಳೆಯ ಹಿನ್ನೆಲೆಯಲ್ಲಿ ಕಾಫಿ ಒಣಗಿಸುವುದು ಅಸಾಧ್ಯವಾಗಿರುವುದರಿಂದ ಕಳೆದ 15 ದಿನಗಳಿಂದ ಕಾಫಿ ಕೊಯ್ಲು ಮಾಡುವು ದನ್ನು ಮುಂದೂಡುತ್ತಿದ್ದು, ಬೆಳೆಗಾರರು ಇದೀಗ ಮಳೆ ನಿಲ್ಲದ ಕಾರಣ ಇತ್ತ ಅರೇಬಿಕಾ ಹಣ್ಣನ್ನು ಗಿಡದಲ್ಲಿ ಬಿಡಲು ಆಗದೆ ಒಣಗಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗೂ ಹೀಗೂ ಕಾಫಿ ಯನ್ನು ಕಷ್ಟಪಟ್ಟು ಒಣಗಿಸಿದರೆ ಕಾಫಿ ಯ ಗುಣಮಟ್ಟ ಸಂಪೂರ್ಣವಾಗಿ ಕುಸಿದು ಮಾರುಕಟ್ಟೆಯಲ್ಲಿ ಇಂತಹ ಕಾಫಿ ಬೇಡಿಕೆ ಇಲ್ಲವಾಗುತ್ತದೆ. ಬೆಳೆಗಾರರ ನೋವು ಯಾರಿಗೂ ಹೇಳದಂತಾಗಿದೆ.

ಸುರಿಯುತ್ತಿರುವ ಮಳೆಯಿಂದ ಕಾಫಿ ಯ ರಕ್ಷಣೆ ಗಾಗಿ ಅರೇಬಿಕಾ ಕಾಫಿ ಬೆಳೆಗಾರರು ಕಟಾವು ಮಾಡಿದ ಕಾಫಿ ಯನ್ನು ಒಣಗಿಸಲು ವ್ಯಾಪಕ ಸರ್ಕಸ್‌ ಮಾಡು ತ್ತಿದ್ದು, ಗೋದಾಮಿನ ಒಳಗೆ ಮನೆಯ ಒಳಗೂ ಕಾಫಿ ಯನ್ನು ಒಣಗಿಸಲು ಇಡುತ್ತಿದ್ದಾರೆ. ಆದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ರೋಬಾಸ್ಟ್‌ ಕಾಫಿ ಕೊಯ್ಲಿನ ಸಮಯದಲ್ಲಿ ಮಳೆ ಬಂದರೆ ಹೇಗಪ್ಪ ಎಂಬ ಪ್ರಶ್ನೆ ಬೆಳೆಗಾರರನ್ನು ಕಾಡುತ್ತಿದೆ. ತಾಲೂಕಿನಲ್ಲಿ ಅರೇಬಿಕಾ ಕಾಫಿ ಬೆಳೆಯುವ ಪ್ರಮಾಣ ಸಣ್ಣಪ್ರಮಾಣದಲ್ಲಿದ್ದು, ಶೇ.85ರಷ್ಟು ಬೆಳೆಗಾರರು ರೋಬಾಸ್ಟ್‌ ಕಾಫಿ ಯನ್ನು ಬೆಳೆಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ಕಾಫಿ ಬೆಳೆಗಾರರು ಬೀದಿ ಪಾಲಾಗುವುದರಲ್ಲಿ ಅನುಮಾನವಿಲ್ಲ.

ತಜ್ಞರ ಹೇಳಿಕೆಯಿಂದ ಆತಂಕ: ಮುಂದಿನ ವರ್ಷದ ಫೆಬ್ರವರಿವರೆಗೆ ಇನ್ನು ಹಲವು ಚಂಡಮಾರುತಗಳು ಬಾದಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದು, ಈ ತಜ್ಞರ ಹೇಳಿಕೆ ಕಾಫಿ ಬೆಳೆಗಾರರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ವಾರ್ಷಿಕ ಬೆಳೆಯಾದ ಕಾಫಿ ಏಕಕಾಲಕ್ಕೆ ಕೊಯ್ಲಿಗೆ ಬರುವುದು ಸಾಮಾನ್ಯ ವಾಗಿದ್ದು, ಕೊಯ್ಲು ನಡೆಸಿದ ನಂತರ ರೋಬಸ್ಟ್‌ ಕಾಫಿ ಯನ್ನು ಒಣಗಿಸಲು ತೀವ್ರ ತರಹದ ಬಿಸಿಲಿನ ಅಗತ್ಯವಿದೆ. ಆದರೆ, ಚಂಡಮಾರುತದ ಪರಿಣಾಮ ಮೊಡಮುಸುಕಿದ ವಾತವಾರಣ ಅಥವಾ ಮಳೆಯಾದರೆ ಬಾರಿ ಪ್ರಮಾಣದಲ್ಲಿ ಕೊಯ್ಲು ನಡೆಸುವ ಕಾಫಿ ಯನ್ನು ಏನು ಮಾಡುವುದು ಎಂಬ ಪ್ರಶ್ನೆ ಬೆಳೆಗಾರರ ಮುಖದಲ್ಲಿ ಈಗಲೇ ಮೂಡಿದೆ.

Advertisement

ಸಣ್ಣ-ಮಧ್ಯಮ ವರ್ಗಕ್ಕೆ ತೊಂದರೆ: ಅಲ್ಪಪ್ರಮಾಣ ದಲ್ಲಿ ಕೊಯ್ಲಿಗೆ ಬರುವ ಅರೇಬಿಕ ಕಾಫಿ ಹಣ್ಣನ್ನು ಒಣಗಿಸಲು ಸ್ಥಿತಿವಂತ ಕಾಫಿ ಬೆಳೆಗಾರರು ಡ್ರೈಯರ್‌ ಆಳವಡಿಸಿಕೊಂಡಿದ್ದಾರೆ. ಆದರೆ ಬೆರಳೆಣಿಯಷ್ಟು ದೊಡ್ಡ ಬೆಳೆಗಾರರು ಡ್ರೈಯರ್‌ ಅಳವಡಿಸಿಕೊಂಡಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಏನು ಮಾಡಲಾಗದೆ ಮೂಕಪ್ರೇಕ್ಷಕರಾಗಿದ್ದಾರೆ.

ಕಳೆದ 2 ವರ್ಷಗಳಿಂದ ರೋಬಾಸ್ಟ್‌ ಕಾಫಿ ಕೊಯ್ಲು ಮಾಡುವ ಸಮಯದಲ್ಲಿ ಬಿದ್ದ ಒಂದೆರಡು ಮಳೆಗೆ ಕಾಫಿ ಬೆಳೆಗಾರರು ತತ್ತರಿಸಿದ್ದು, ಮಳೆ ನಿರಂತರ ವಾಗಿ ಬಂದಲ್ಲಿ ಬೆಳೆಗಾರರು ಬೀದಿ ಪಾಲಾಗು ವುದರಲ್ಲಿ ಅನುಮಾನವಿಲ್ಲ. ಈ ಸ್ಥಿತಿಯನ್ನು ಎದುರಿಸಲು ಕಾಫಿ ಮಂಡಳಿ ಯಾವುದೆ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ರೂಪಿಸ ದಿರುವುದು ಕಾಫಿ ಬೆಳೆ ಗಾರರಿಗೆ ತೊಡಕಾಗಿದೆ. ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೆ ಅರೇಬಿಕಾ ಕಾಫಿ ಬೆಳೆಗಾರರು ತೀವ್ರ ಪೆಟ್ಟು ತಿಂದಿದ್ದಾರೆ. ಕಾಫಿ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಧಾವಿಸಬೇಕು. ಡಾ.ಮೋಹನ್‌ ಕುಮಾರ್‌, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ

ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಿದ ಕಾಫಿ ಯನ್ನು ಕಣದಲ್ಲಿ ಒಣಗಿಸಲಾಗದೆ ಗೋದಾಮಿನಲ್ಲಿ ಹರಿವಿದ್ದೇನೆ. ಕಾಫಿ ಬೆಳೆಗಾರನ ಬದುಕು ತುಂಬಾ ಕಷ್ಟಕರವಾಗಿದೆ. ●ಧರಣೇಶ್‌, ಇಬ್ಬಡಿ ಗ್ರಾಮದ ಕಾಫಿ ಬೆಳೆಗಾರ

Advertisement

Udayavani is now on Telegram. Click here to join our channel and stay updated with the latest news.

Next