Advertisement

Pollution: ಮಳೆ ದೆಹಲಿಯನ್ನು ಕಾಪಾಡಿತು!- ತಂಪೆರೆದ ವರುಣ: ತಗ್ಗಿದ ವಾಯು ಮಾಲಿನ್ಯ

10:57 PM Nov 10, 2023 | Team Udayavani |

ನವದೆಹಲಿ: ತೀವ್ರ ವಾಯು ಮಾಲಿನ್ಯದಿಂದ ಪರಿತಪಿಸುತ್ತಿದ್ದ ದೆಹಲಿ ಜನರಿಗೆ ವರುಣ ಕೃಪೆ ತೋರಿದ್ದಾನೆ. ದೆಹಲಿ ಮತ್ತು ಗಾಜಿಯಾಬಾದ್‌ನಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದೆ. ಜೋರಾದ ಗಾಳಿ ಮತ್ತು ಮಳೆಯು ಭೂಮಿಯನ್ನು ತಂಪಾಗಿಸಿದೆ. ಇದರಿಂದ ಸಹಜವಾಗಿ ವಾಯು ಗುಣಮಟ್ಟ ತುಸು ಸುಧಾರಣೆ ಕಂಡಿದೆ.

Advertisement

ಇನ್ನೊಂದೆಡೆ, ಮಾಲಿನ್ಯದ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಕಳೆ ಸುಡುವುದನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ, ಪಂಜಾಬ್‌ ಮತ್ತು ಹರ್ಯಾಣ ಸರ್ಕಾರಗಳಿಗೆ ಸೂಚಿಸಿದೆ. “ಜನರ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಂಡಿದ್ದಾನೆ. ಮಳೆ ಸುರಿದು, ಗಾಳಿ ಬೀಸಿದಕ್ಕಾಗಿ ಸರ್ಕಾರಕ್ಕೆ ಅಲ್ಲ, ಬದಲಾಗಿ ಭಗವಂತನಿಗೆ ಧನ್ಯವಾದಗಳು’ ಎಂದು ನ್ಯಾಯಪೀಠ ಹೇಳಿದೆ.

“ಕಳೆ ಸುಡುವಿಕೆ ನಿಲ್ಲಬೇಕು. ನೀನೇನು ಕ್ರಮ ಕೈಗೊಳ್ಳುತ್ತಿರೋ ಅದು ನಿಮ್ಮ ಆಯ್ಕೆ. ಆದರೆ ದೀಪಾವಳಿ ವೇಳೆಗೆ ವಾಯು ಗುಣಮಟ್ಟ ಉತ್ತಮವಾಗಬೇಕಿದೆ’ ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.

ಇದೇ ವೇಳೆ, ದೆಹಲಿಯಲ್ಲಿ ಮಳೆ, ಗಾಳಿಯಿಂದಾಗಿ ಹವಾಮಾನ ಬದಲಾವಣೆಯಾಗಿದ್ದು, ವಾಯು ಮಾಲಿನ್ಯ ತುಸು ತಗ್ಗಿದೆ. ಹೀಗಾಗಿ ನ.13ರಿಂದ ಆರಂಭವಾಗಬೇಕಿದ್ದ ಸಮ-ಬೆಸ ಯೋಜನೆಯನ್ನು ದೆಹಲಿ ಸರ್ಕಾರ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next