Advertisement

ಮಳೆ ಪ್ರಮಾಣದಲ್ಲಿ ವರ; ಉಳಿಸಿಕೊಳ್ಳುವಲ್ಲಿ ಶಾಪ

11:55 AM Apr 10, 2021 | Team Udayavani |

ಬೆಂಗಳೂರು: ನಗರದಲ್ಲಿ ಪ್ರತಿ ವರ್ಷ ಉತ್ತಮ ಮಳೆ ಆಗುತ್ತದೆ. ಮಳೆಗಾಲದಲ್ಲಿ ಬಿದ್ದ ಮಳೆಯನ್ನು ಉಳಿಸಿಕೊಳ್ಳುವ ಕೆಲಸ ಮಾತ್ರ ಆಗುತ್ತಿಲ್ಲ. ಇದರ ಪರಿಣಾಮ ಪ್ರತಿ ಬೇಸಿಗೆಯಲ್ಲಿ ಅನುಭವಿಸುವಂತಾಗಿದೆ.

Advertisement

ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಳೆ ಪ್ರಮಾಣ ಗಮನಿಸಿದರೆ 2012 ವರ್ಷ ಹೊರತು ಪಡಿಸಿ2010ರಿಂದ 2020ರವರೆಗೆ ಸರಾಸರಿ 600 ಮಿ.ಮೀಗಿಂತ ಅಧಿಕ ಮಳೆ ಆಗಿದೆ. ಮಳೆ ಪ್ರಮಾಣದಲ್ಲಿ ನಾವು ಅದೃಷ್ಟವಂತರೆ ಆದರೆ, ಈ ರೀತಿ ಸಮೃದ್ಧವಾಗಿ ಬಿದ್ದಮಳೆಯನ್ನು ಸಂಗ್ರಹಿಸಿಕೊಳ್ಳುವುದು ಮಾತ್ರ ಆಗಿಲ್ಲ. ಮಳೆ ನೀರು ಸಂಗ್ರಹ ಮಾಡುವುದಕ್ಕೆ ಹಲವು ಮಾರ್ಗಗಳಿವೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಆದ್ಯತೆ ಸಿಗುತ್ತಿಲ್ಲ. ಇದರ ಪರಿಣಾಮ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿಗೆ ಕಾರಣ ಎನ್ನುತ್ತಾರೆ ತಜ್ಞರು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ- ಅಂಶಗಳ ಪ್ರಕಾರ, ನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಮಳೆ ಆಗಿದೆ. 2012ರಲ್ಲಿ 550 ಮಿ.ಮೀ ಮಳೆ ಆಗಿರುವುದು ಬಿಟ್ಟರೆ ಉಳಿದೆಲ್ಲ ವರ್ಷ ನಗರದಲ್ಲಿ 600 ಮಿ.ಮೀ ನಿಂದ ಒಂದು ಸಾವಿರ ಮಿ.ಮೀ ವರೆಗೆ ಮಳೆ ಆಗಿದೆ.

ನಗರದ ಸ್ಥಳೀಯ ಜಲಮೂಲಗಳ ರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಅದನ್ನು ಭದ್ರಪಡಿಸುವುದು ತುಂಬಾ ಮುಖ್ಯ. ಮುಂಬೈನಂತಹ ಮಹಾನಗರಗಳಲ್ಲೂ ಸ್ಥಳೀಯ ನೀರಿನ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಡಾ. ಕ್ಷಿತಿಜ್‌ ಅರಸ್‌.

ನಗರದ ವಿಸ್ತೀರ್ಣ ಹೆಚ್ಚಾದಂತೆ ಮಳೆ ಸಂಗ್ರಹದ ಪ್ರಮಾಣವೂ ಹೆಚ್ಚಾಗಬೇಕು. ಆಯಾ ಪ್ರದೇಶದಲ್ಲಿ ಬೀಳುವ ಮಳೆಯನ್ನು ಸಂಗ್ರಹ ಮಾಡಿಕೊಳ್ಳಬಹುದು.ಆದರೆ, ಸರ್ಕಾರ ಮತ್ತು ಪಾಲಿಕೆಯ ಯೋಜನೆ, ಬಜೆಟ್‌ಸೇರಿದಂತೆ ಯಾವುದೇ ಮಾಸ್ಟರ್‌ ಪ್ಲಾನ್‌ನಲ್ಲಿಯೂಇಂತಿಷ್ಟು ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ಮಾಡುತ್ತೇವೆ ಎನ್ನುವ ಪ್ರಸ್ತಾವನೆಯೇ ಕಾಣಿಸುವುದಿಲ್ಲ. ನೀರು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿಲ್ಲ. ಕೆರೆಅಭಿವೃದ್ಧಿ ಮಾಡುತ್ತೇವೆ ಎನ್ನುವುದಕ್ಕೆ ಮಾತ್ರ ಪಾಲಿಕೆ ಸೀಮಿತವಾಗಿದೆ. ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟಾದರೂ ಸಂಗ್ರಹಕ್ಕೆ ನಾವು ಆದ್ಯತೆ ನೀಡಿದರೆ, ನಗರದ ಶೇ.90ರಷ್ಟು ಅತ್ಯವಶ್ಯಕವನ್ನು ಪೂರ್ಣಗೊಳಿಸಬಹುದು. ಮಳೆ ನೀರು ಸಂಗ್ರಹಕ್ಕೆ ಪೂರಕವಾದ ಕಾನೂನುಗಳನ್ನು ರೂಪಿಸಿಕೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ನೀರು ಉಳಿಸಿಕೊಳ್ಳಲು ಸಾಕಷ್ಟು ಅವಕಾಶ ಇದೆ. ಈಗಾಗಲೇ ವಾಬಸಂದ್ರ, ಗವಿಕೆರೆ, ಕ್ಯಾಲಸನಹಳ್ಳಿ, ಬಂಡೆನೆಲಸಂದ್ರ ಸೇರಿದಂತೆ 13ಕ್ಕೂ ಹೆಚ್ಚು ಕೆರೆಗಳನ್ನುಅಭಿವೃದ್ಧಿಪಡಿಸಲಾಗಿದ್ದು, ಇವುಗಳಲ್ಲಿ ಬೇಸಿಗೆಯಲ್ಲೂನೀರು ಸಿಗುತ್ತಿದೆ ಎನ್ನುತ್ತಾರೆ ಕೆರೆಗಳ ಸಂರಕ್ಷಕ ಆನಂದ ಮಲ್ಲಿಗವಾಡ ಹೇಳುತ್ತಾರೆ.

ಕೆರೆಗಳನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಕೆರೆ ಮತ್ತು ಸಾರ್ವಜನಿಕರ ನಡುವೆ ಬಾಂಧವ್ಯ ವೃದ್ಧಿ ಮಾಡುವುದಕ್ಕೂ ಯೋಜನೆ ರೂಪಿಸಿಕೊಳ್ಳಲಾಗಿದೆ. ಅಲ್ಲದೆ, ಯಾವುದೇ ಕೆರೆ ಅಭಿವೃದ್ಧಿ ಮಾಡಿದರೂ ಕೆರೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜೀವ ವೈವಿಧ್ಯತೆಗೆ ಪೂರಕವಾದ ಹಣ್ಣು ಬಿಡುವ ಸಸಿಗಳು ಸೇರಿದಂತೆ ಮಣ್ಣು ಸಡಿಲಿಕೆ ತಡೆಯುವ ಸಸಿಗಳನ್ನು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಡಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ. ನಗರದ ಅಂತರ್ಜಲ ಪ್ರಮಾಣ: ನಗರದಲ್ಲಿ ಕಳೆದ ಐದು ವರ್ಷಗಳ ಅಂತರ್ಜಲ ಪ್ರಮಾಣದಲ್ಲಿ ಏರುಪೇರಾಗಿದೆ. 2020ರಲ್ಲಿ ನಗರದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ಆಗಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕೆಲವು ಕಡೆ ವೃದ್ಧಿಸಿರುವುದು ಅಂತರ್ಜಲ ನಿರ್ದೇಶನಾಲಯ ನೀಡಿರುವ ಅಂಕಿ- ಅಂಶದಲ್ಲಿ ಬೆಳಕಿಗೆ ಬಂದಿದೆ.

2020ರಲ್ಲಿ ಬೆಂಗಳೂರು ಪೂರ್ವದಲ್ಲಿ ಅಂತರ್ಜಲ (ಭೂಮಿಯ ಆಳದಲ್ಲಿ ನೀರು ವೃದ್ಧಿಸಿರುವ ಪ್ರಮಾಣ)ಮಟ್ಟ ವೃದ್ಧಿಸಿದೆ. 2019ರಲ್ಲಿ 28.17ರಲ್ಲಿ, 2020ರಲ್ಲಿ 45.75 ಪ್ರಮಾಣದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗಿದೆ. ಆದರೆ, ಇದೇ ಸಂದರ್ಭದಲ್ಲಿ ನಗರದ ವಿವಿಧೆಡೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದು ಸಹ ವರದಿ ಆಗಿದೆ.

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next