Advertisement

ಮೈಸೂರಿನಲ್ಲಿ ಧಾರಕಾರ ಮಳೆ: ಗೋಡೆ ಕುಸಿದು ವೃದ್ಧ ಬಲಿ

07:18 PM Oct 09, 2020 | Mithun PG |

ಮೈಸೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಗೋಡೆ ಕುಸಿದ ಪರಿಣಾಮ ಓರ್ವ ವೃದ್ಧ ಬಲಿಯಾಗಿದ್ದಾರೆ.

Advertisement

ಮೃತಪಟ್ಟವರನ್ನು ಅರವಿಂದ ನಗರದ ನಿವಾಸಿ ನಂಜುಂಡಸ್ವಾಮಿ (55) ಎಂದು ಗುರುತಿಸಲಾಗಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಗೋಡೆ ಕುಸಿದಿದ್ದು,  ನಂಜುಂಡಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಭೇಟಿ ನೀಡಿದ್ದು, ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.  20 ಸಾವಿರ ಪ್ರಾಥಮಿಕ ಪರಿಹಾರ ಹಾಗೂ ಶವಸಂಸ್ಕಾರಕ್ಕೆ 5 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.

Advertisement

5 ಲಕ್ಷ ಪರಿಹಾರವನ್ನು ಸರ್ಕಾರದಿಂದ ಕೊಡಿಸುವುದಾಗಿ ಶಾಸಕ ರಾಮದಾಸ್ ಭರವಸೆ ನೀಡಿದ್ದಾರೆ.

ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮೂರು ಕಾರುಗಳು ಜಖಂಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next