Advertisement

ಕುಂದಾಪುರ: ಗಾಳಿ-ಮಳೆ; ಮರ ಬಿದ್ದು ಮನೆಗಳಿಗೆ ಹಾನಿ

12:12 PM Jul 22, 2018 | |

ಕುಂದಾಪುರ: ತಾಲೂಕಿನೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಕಾವ್ರಾಡಿ ಗ್ರಾಮದ ಸಾಧು ಶೆಡ್ತಿ ಅವರ ಮನೆ ಮೇಲೆ ಮರ ಬಿದ್ದು, ಸುಮಾರು 15 ಸಾವಿರ ರೂ. ನಷ್ಟವಾಗಿದೆ. ಅದೇ ಗ್ರಾಮದ ಅಬ್ರಹಾಂ ಅವರ ಮನೆ ಮೇಲೆ ಮರ ಬಿದ್ದು, 10 ಸಾವಿರ ರೂ. ನಷ್ಟ ಉಂಟಾಗಿದೆ. 

Advertisement

ಕುಸಿದ ಬಾವಿ: ಕಟ್‌ ಬೆಳೂರು ಗ್ರಾಮದ ಇಂದಿರಾ ನಗರ ನಿವಾಸಿ ರಿಚರ್ಡ್‌ ಅವರ ಹೊಸ ಬಾವಿ ಗುರುವಾರ ಕುಸಿದಿದೆ. ಹಟ್ಟಿಯಂಗಡಿ ಗ್ರಾಮದ ಆನಂದ ಮೊಗವೀರ ಅವರ ಮಣ್ಣಿನ ಗೋಡೆಯ ಮನೆ ಭಾಗಶಃ ಕುಸಿದಿದೆ. ಕಡಲಬ್ಬರ ಜೋರು: ಕೋಡಿ, ಕೋಟೇಶ್ವರ ಕಿನಾರ, ಗಂಗೊಳ್ಳಿ, ಮರವಂತೆ, ಉಪ್ಪುಂದದ ಮುಂತಾದ ಕಡೆ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕೆಲವೆಡೆ ಕಡಲ್ಕೊರೆತ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next