Advertisement

ಮಳೆ: ಬೈಂದೂರು ಪರಿಸರದಲ್ಲಿ ಅಪಾರ ಹಾನಿ

11:15 PM Sep 07, 2020 | mahesh |

ಬೈಂದೂರು: ರವಿವಾರ ಸಂಜೆ ಸುರಿದ ಮಳೆಗೆ ಬೈಂದೂರು ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದೆ. ಕಾಲೊ¤àಡು ಗ್ರಾಮದ ಪೈನಾಡಿ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಅಪಾರ ಕೃಷಿ ಭೂಮಿಗೂ ಹಾನಿ ಸಂಭವಿಸಿದೆ. ನಾಗಯ್ಯ ಪೂಜಾರಿ ಅವರ ಕೊಟ್ಟಿಗೆಗೆ ನೀರು ನುಗ್ಗಿ ನಾಲ್ಕು ದನಗಳು ನೀರುಪಾಲಾಯಾಗಿವೆ. ಯಡ್ತರೆ ಗ್ರಾಮದ ಚತಕಲ್‌ ಅತ್ಯಾಡಿಯ ಬಿ.ಜೆ. ಬೆನ್ನಿ ಅವರ ಕೋಳಿ ಫಾರ್ಮ್ಗೆ ನೀರು ನುಗ್ಗಿ 5 ಸಾವಿರ ಕೋಳಿಗಳು ಸತ್ತು ಹೋಗಿವೆ. ಅಂದಾಜು 6 ಲಕ್ಷ ರೂ. ನಷ್ಟ ಸಂಭವಿಸಿದೆ.

Advertisement

ಯಳಜಿತ ಗ್ರಾಮದ ತೊಂಡ್ಲೆ ದೇವಪ್ಪ ಪೂಜಾರಿ ಮೊಳಹಿತ್ಲು ಅವರ ಮನೆಗೆ ನೀರು ನುಗ್ಗಿ ಆವರಣಗೋಡೆ, ಅಂಗಳದ ನೀರು ಮನೆಗೆನುಗ್ಗಿ 1 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ. ಉಪ್ಪುಂದ ಹೊಳ್ಳರಹಿತ್ಲು ಬಳಿ ಸಿಡಿಲು ಬಡಿದು ಗಿರಿಜಾ ಮಡಿವಾಳ ಅವರ ಮನೆಯ
ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್‌ ಸಲಕರಣೆಗಳು ಸುಟ್ಟು ಹೋಗಿವೆ. ಪೈಮಾಡಿಯಲ್ಲಿ ಮೋರಿಯ ಭಾಗ ಕೊಚ್ಚಿ ಹೋಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next