Advertisement

ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಭತ್ತದ ಬೆಳೆ

02:06 PM Sep 06, 2022 | Team Udayavani |

ಶ್ರೀರಂಗಪಟ್ಟಣ: ಭಾನುವಾರ ಸುರಿದ ನಗರಕೆರೆ ಮಾರ್ಗದ ರಸ್ತೆ ಧಾರಾಕಾರ ಮಳೆಗೆ ಆರ್‌ಬಿಲ್‌ಎಲ್‌ ನಾಲೆ ಏರಿ ಒಡೆದು ನಾಟಿ ಮಾಡಿದ ಭತ್ತದ ಜಮೀನು ಜಲಾವೃತವಾಗಿ ಬೆಳಗೊಳ ಹಾಗೂ ಹೊಸಾನಂದೂರು ಗ್ರಾಮದ ಬಳಿ ಅಪಾರ ಹಾನಿಯಾಗಿದೆ.

Advertisement

ಆರ್‌ಬಿಎಲ್‌ಎಲ್‌ ನಾಲೆಯಲ್ಲಿ ನೀರಿನ ಜತೆಗೆ ಮಳೆ ನೀರು ಪ್ರಮಾಣ ಹೆಚ್ಚಾಗಿ ನಾಲೆಯ ಏರಿ ಮೇಲೆಲ್ಲಾ ನೀರು ಹರಿದು ಆನಂದೂರು ಗ್ರಾಮದ ಬಳಿ ನಾಲೆ ಏರಿಗೆ ಹಾನಿಯಾಗಿದೆ. ಇದರಿಂದಾಗಿ ರೈತರ ಓಡಾಟಕ್ಕೆ ತೊಂದರೆಯಾಗಿದೆ.

ಕೆಆರ್‌ಎಸ್‌ ಕೆಳಭಾಗದ ಗ್ರಾಮಗಳ ಜಮೀನುಗಳಿಗೆ ಸುಮಾರು 15 ಕಿ.ಮೀ ಉದ್ದದ ಆರ್‌ಬಿಎಲ್‌ಎಲ್‌ ನಾಲೆ ಉದ್ದಕ್ಕೂ ಮಳೆ ಆರ್ಭಟಕ್ಕೆ ನೀರು ನಾಲೆಯಲ್ಲಿ ಹೆಚ್ಚಾಗಿ ಏರಿ ಮೇಲೆ ಹರಿದಿದೆ.

ಹೆಚ್ಚಿನ ನೀರು ಹಳ್ಳಗಳ ಮೂಲಕ ಹರಿದು ವಿರಿಜಾ ನಾಲೆಗೆ ಸೇರಿ ವಿರಿಜಾ ನಾಲೆಯೂ ತುಂಬಿದೆ. ಹೊಸ ಆನಂದೂರು ಹಾಗೂ ಬೆಳಗೊಳ ಗ್ರಾಮದ ಕೆರೆ ಗದ್ದೆ ಬಯಲು ಪ್ರದೇಶದ ಜಮೀನು ಸಂಪೂರ್ಣ ಜಲಾವೃತವಾಗಿದೆ.

ಈಗಾಗಲೇ ಭತ್ತದ ನಾಟಿ ಕಾರ್ಯ ಮುಗಿಸಿ ನೆಮ್ಮದಿಯಿಂದಿದ್ದ ರೈತರು ಕಂಗಾಲಾಗಿದ್ದು. ಹಳ್ಳದ ಕಾಮಗಾರಿ ನಡೆಸದ ಕಾರಣ ಈ ಭಾಗದ ರೈತರುಪ್ರತಿ ವರ್ಷ ಇಂತಹ ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯ ರೈತ ಚಂದ್ರು ಅಳಲು ತೋಡಿಕೊಂಡರು.

Advertisement

ಕಳಪೆ ಮಟ್ಟದ ದುರಸ್ತಿ ಕಾರ್ಯ: ಆರ್‌ಬಿಎಲ್‌ಎಲ್‌ ನಾಲೆ ಒಡೆಯಲು ನೀರಿನ ರಭಸವೇ ಕಾರಣ. ನಾಲೆ ಏರಿ ಹಾಗೂ ಏರಿಕೆಳಭಾಗದ ಹಳ್ಳ ದುರಸ್ತಿ ಕಳಪೆ ಮಟ್ಟದಿಂದ ಕೂಡಿರುವುದು ಕಂಡು ಬಂದಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಾಲೆಏರಿ ದುರಸ್ತಿ, ಬೆಳೆ ಹಾನಿ ಪರಿಹಾರವಿತರಣೆ ಮಾಡಬೇಕು ಎಂದು ರೈತ ಮುಖಂಡ ಬೆಳಗೊಳ ವಿಷಕಂಠು ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next