Advertisement

ಕೆರ್ವಾಶೆ: ಆಲಿಕಲ್ಲು ಸಹಿತ ಗಾಳಿ-ಮಳೆ

02:43 AM Apr 11, 2021 | Team Udayavani |

ಅಜೆಕಾರು, ಎ. 10: ಕೆರ್ವಾಶೆಯಲ್ಲಿ ಶನಿವಾರ ಸಂಜೆ ಸುಮಾರು 2 ಗಂಟೆಗಳ ಕಾಲ ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ.

Advertisement

ಬಿರುಗಾಳಿಯಿಂದಾಗಿ ಅಡಿಕೆ ಮರ, ಬಾಳೆ ಗಿಡಗಳು ಉರುಳಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಬೃಹತ್‌ ಮರಗಳು ಉರುಳಿ ಬಿದ್ದು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಹಲವಾರು ಮನೆ ಗಳ ಮೇಲ್ಛಾವಣಿಗೂ ಹಾನಿ ಸಂಭವಿಸಿದೆ.

ಹೆದ್ದಾರಿಗೆ ಉರುಳಿದ ವಿದ್ಯುತ್‌ ಕಂಬ
ವರಂಗ ಮಾತಿಬೆಟ್ಟು ಸೇತುವೆ ಬಳಿ ಶನಿವಾರ ಸಂಜೆ ಭಾರೀ ಗಾಳಿ- ಮಳೆಯಿಂದಾಗಿ ಮರ ಬಿದ್ದು ವಿದ್ಯುತ್‌ ಕಂಬ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ಉರುಳಿತು. ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೂಂಡಿತ್ತು.

ವೇಣೂರು: ಸಿಡಿಲು, ಮಳೆ
ಮಂಗಳೂರು/ ವೇಣೂರು: ಶನಿವಾರ ಸಂಜೆ ವೇಣೂರು ಪರಿಸರದಲ್ಲಿ ಸಿಡಿಲು ಸಹಿತ ಅರ್ಧತಾಸು ಮಳೆ ಯಾಗಿದೆ. ಪುತ್ತೂರಿನ ಸರ್ವೆ, ಪುರುಷರ ಕಟ್ಟೆ, ಗಡಿಪಿಲ ಸುತ್ತಮುತ್ತ ಮಳೆಯಾಗಿದೆ.

Advertisement

ಬಜಿರೆ ಶಾಲೆಯ ಕಾಂಪೌಂಡ್‌ನ‌ಲ್ಲಿದ್ದ ಅಶೋಕ ಮರದ ಬುಡಕ್ಕೆ ಸಿಡಿಲು ಬಡಿದು ಇಂಟರ್‌ಲಾಕ್‌ ಅಳವಡಿಸಿದ ದಂಡೆಗೆ ಹಾನಿಯಾಗಿದೆ.

ಎ. 14ರಿಂದ ಎರಡು ದಿನ ಮಳೆ
ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ ಪಣಂಬೂರಿನಲ್ಲಿ 36 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಉಷ್ಣಾಂಶ ಹೆಚ್ಚು ಇತ್ತು. 26.3 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಹೆಚ್ಚು ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಎ. 14ರಿಂದ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next