Advertisement

ಮಳೆ-ಗಾಳಿಗೆ ನಾನಾ ಕಡೆ ಅನಾಹುತ

10:16 AM May 22, 2019 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಗೆ ನಾನಾ ಕಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ತಡರಾತ್ರಿ 12 ಗಂಟೆ ಸುಮಾರಿಗೆ ಎಲ್ಲೆಡೆ ಭಾರೀ ಗಾಳಿ ಬೀಸಿ, ಗುಡುಗು ಸಹಿತ ಮಳೆಯಾದರೆ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.

Advertisement

ತಾಲೂಕಿನ ಕಡಗಂದೊಡ್ಡಿಯಲ್ಲಿ ಮಳೆ ಗಾಳಿಗೆ ಗುಡಿಸಲು ಛಾವಣಿ ಹಾರಿ ಹೋದರೆ, ಕಂಬಗಳು ನೆಲಕ್ಕುರುಳಿವೆ. ಚಂದ್ರಬಂಡಾದಲ್ಲಿ ತಾಯಪ್ಪ ತನ್ನ ಹೊಲದಲ್ಲಿ ಪಾಲಿ ಹೌಸ್‌ಗೆ ಅಳವಡಿಸಿದ್ದ ಮೇಲ್ಪದರ ಪ್ಲಾಸ್ಟಿಕ್‌ ಸಂಪೂರ್ಣ ಕಿತ್ತು ಹೋಗಿದ್ದು, ಅಂದಾಜು 3 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎನ್ನಲಾಗುತ್ತಿದೆ. ಇನ್ನು ಕಡಗಂದೊಡ್ಡಿ ಗ್ರಾಮದ ಅಂಜಿನಮ್ಮರ ಗುಡಿಸಲು ಗಾಳಿಗೆ ಕಿತ್ತು ಹೋಗಿದೆ. ಮೇಲ್ಪದರು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿದ್ದು, ಅವರ ಬದುಕು ಬೀದಿ ಪಾಲಾಗಿದೆ. ಗ್ರಾಮದಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕುರುಳಿ, ರಾತ್ರಿಯೇ ವಿದ್ಯುತ್‌ ವ್ಯತ್ಯಯವಾಗಿತ್ತು. ಇನ್ನು ತಾಲೂಕಿನ ಮನ್ಸಲಾಪುರ ಗ್ರಾಮದಲ್ಲೂ ರೈತನೊಬ್ಬನ ಹೊಲದಲ್ಲಿ ಅಳವಡಿಸಿದ್ದ ಪಾಲಿ ಹೌಸ್‌ ಕಿತ್ತು ಹೋಗಿರುವ ಮಾಹಿತಿ ಇದೆ. ಸಿರವಾರ, ಲಿಂಗಸುಗೂರು, ಮಸ್ಕಿ ಸೇರಿ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾದ ವರದಿಯಾಗಿದೆ. ಆದರೆ, ಕೆಲವೆಡೆ ಬರೀ ಗುಡುಗು ಸಿಡಿಲಿನ ಆರ್ಭಟ ಇತ್ತಾದರೂ ಮಳೆ ಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next