Advertisement

Bantwal; ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವು

01:00 AM Feb 10, 2024 | Team Udayavani |

ಬಂಟ್ವಾಳ: ಬಿ.ಸಿ. ರೋಡಿನ ಕೈಕುಂಜೆಯಲ್ಲಿ ಅಜಿಲಮೊಗರು ನಿವಾಸಿ ದೇಜಪ್ಪ ಯಾನೆ ಸತೀಶ್‌ ಅವರು ಬಂಟ್ವಾಳ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವಾಗಿದೆ.

Advertisement

ಅವರು ಬೇರೊಂದು ಕಾರಿನಲ್ಲಿ ಚಾಲಕನಾಗಿ ಉಪ್ಪಳಕ್ಕೆ ಹೋಗುವ ಉದ್ದೇಶದಿಂದ ರಿಕ್ಷಾವನ್ನು ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿ ತೆರಳಿದ್ದರು. ಬಳಿಕ ಮುಂಜಾನೆ 3.30ರ ಸುಮಾರಿಗೆ ಬಂದು ನೋಡಿದಾಗ ಆಟೋ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಆಟೋ ರಿಕ್ಷಾವನ್ನು ಕಳವು ಮಾಡಿಕೊಂಡು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಒಬ್ಬ ಪುರುಷ ಹಾಗೂ ಮಹಿಳೆ ರಿಕ್ಷಾವನ್ನು ಹಿಂದಕ್ಕೆ ದೂಡಿ ಬಳಿಕ ಯಾವುದೋ ಸಾಧನದ ಮೂಲಕ ರಿಕ್ಷಾ ಸ್ಟಾರ್ಟ್‌ ಮಾಡಿಕೊಂಡು ಹೋಗಿದ್ದಾರೆ.

ಈ ಭಾಗದಲ್ಲಿ ಅಪರಿಚಿತರ ಓಡಾಟ ಹೆಚ್ಚಿದ್ದು, ಕೆಲವೊಂದು ಜೋಡಿಗಳು ಕೂಡ ಕಂಡುಬರುತ್ತಾರೆ ಎಂಬ ಆರೋಪಗಳಿವೆ. ಜತೆಗೆ ರಾತ್ರಿ ವೇಳೆ ಬೀದಿ ದೀಪಗಳನ್ನು ಆರಿಸಿಕೊಂಡು ಹೋಗುವ ಕಿಡಿಗೇಡಿಗಳು ಕೂಡ ಇದ್ದಾರೆ ಎಂಬುದು ಸ್ಥಳೀಯರ ಹೇಳಿಕೆಯಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next