Advertisement

ಮಗುವಿಗೆ ಒಂಟೆ ಹಾಲು ತಲುಪಿಸಿದ ರೈಲ್ವೇ

12:18 PM Apr 13, 2020 | mahesh |

ಮುಂಬಯಿ: ಮೇಕೆ, ಹಸು ಮತ್ತು ಎಮ್ಮೆ ಹಾಲಿಗೆ ಅಲರ್ಜಿ ಹೊಂದಿರುವ ತನ್ನ ಮೂರೂವರೆ ವರ್ಷದ ಮಗುವಿಗೆ ಹಾಲು ಲಭ್ಯವಿಲ್ಲದಿರುವ ಬಗ್ಗೆ ಮಹಿಳೆಯೊಬ್ಬರು ಟ್ವೀಟ್‌ ಮಾಡಿದ ಅನಂತರ ರೈಲ್ವೆ ಮುಂಬಯಿಯ ಕುಟುಂಬವೊಂದಕ್ಕೆ 20 ಲೀಟರ್‌ ಒಂಟೆ ಹಾಲನ್ನು ಸಾಗಿಸಿ ಸಹರಿಸಿದೆ.
ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಬೋತ್ರಾ ಈ ಬಗ್ಗೆ ಟ್ವೀಟ್‌ ಮಾಡಿದಾಗ ರೈಲ್ವೆಯ ಈ ಒಳ್ಳೆಯ ಕಾರ್ಯ ಶನಿವಾರ ಬೆಳಕಿಗೆ ಬಂದಿದೆ.

Advertisement

20 ಲೀ. ಒಂಟೆ ಹಾಲು ರಾತ್ರಿ ರೈಲಿನಲ್ಲಿ ಮುಂಬಯಿಗೆ ತಲುಪಿತು. ಕುಟುಂಬವು ಅದರ ಭಾಗವನ್ನು ನಗರದ ಇನ್ನೊಬ್ಬ ನಿರ್ಗತಿಕ ವ್ಯಕ್ತಿಯೊಂದಿಗೆ ಹಂಚಿಕೊಂಡಿದೆ. ಕಂಟೇನರ್‌ ಅನ್ನು ತೆಗೆದುಕೊಳ್ಳಲು ನಿಗದಿತ ಸಮಯವನ್ನು ನಿಲ್ಲಿಸಿದ ಸಿಪಿಟಿಎಂ, ವಾಯುವ್ಯ ರೈಲ್ವೆಯ ಎಸ್‌. ತರುಣ್‌ ಜೈನ್‌ ಅವರಿಗೆ ಧನ್ಯವಾದಗಳು ಎಂದು ಬೋತ್ರಾ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಮಗುವಿನ ತಾಯಿ ರೇಣು ಕುಮಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವೀಟ್‌ ನಲ್ಲಿ ಟ್ಯಾಗ್‌ ಮಾಡಿದ್ದು, ಅದರಲ್ಲಿ ಅವರು ತಮ್ಮ ಮಗನ ದುಃಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದರು. ಸರ್‌ ನನ್ನ 3.5 ವರ್ಷ ವಯಸ್ಸಿನ ಮಗು ಸ್ವಲೀನತೆ ಮತ್ತು ತೀವ್ರ ಆಹಾರ ಅಲರ್ಜಿಯಿಂದ ಬಳಲುತ್ತಿದೆ. ಮಗು ಒಂಟೆ ಹಾಲು ಮತ್ತು ಸೀಮಿತ ಪ್ರಮಾಣದ ದ್ವಿದಳ ಧಾನ್ಯಗಳ ಮೇಲೆ ಬದುಕುಳಿಯುತ್ತಿದೆ. ಲಾಕ್‌ಡೌನ್‌ ಪ್ರಾರಂಭವಾದಾಗ ದೀರ್ಘ‌ಕಾಲ ಉಳಿಯಲು ನನಗೆ ಸಾಕಷ್ಟು ಒಂಟೆ ಹಾಲು ಇರಲಿಲ್ಲ. ಕ್ಯಾಮೆರಿ ಹಾಲು ಅಥವಾ ಅದರ ಪುಡಿಯನ್ನು ರಾಜಸ್ಥಾನದಿಂದ ಪಡೆಯಲು ನನಗೆ ಸಹಾಯ ಮಾಡಿ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಾಜಸ್ಥಾನ ಮೂಲದ ಒಂಟೆ ಹಾಲಿನ ಉತ್ಪನ್ನಗಳ ಮೊದಲ ಬ್ರಾಂಡ್‌ ಅಡ್ವಿಕ್‌ ಫ‌ುಡ್ಸ್‌ ಅವರನ್ನು ಸಂಪರ್ಕಿಸಿದ ಬೋತ್ರಾ ಸೇರಿದಂತೆ ದೇಶಾದ್ಯಂತದ ಜನರು ಟ್ವಿಟರ್‌ನಲ್ಲಿ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಕಂಪೆನಿಯು ತನ್ನ ಒಂಟೆ ಹಾಲಿನ ಪುಡಿಯನ್ನು ಮಗುವಿಗೆ ನೀಡಿತು. ಆದರೆ ಅದನ್ನು ಮುಂಬಯಿಗೆ ಕಳುಹಿಸುವುದು ಸಮಸ್ಯೆಯಾಗಿತ್ತು. ಬೋತ್ರಾ ಈ ಬಗ್ಗೆ ಟ್ವೀಟ್‌ ಮಾಡಿದಾಗ ಈ ವಿಷಯ ನಮ್ಮ ಗಮನಕ್ಕೆ ಬಂದಿತು. ನಾನು ಹಿರಿಯ ಡಿಸಿಎಂ, ಅಜ್ಮಿರ್‌, ಮಹೇಶ್‌ ಚಂದ್‌ ಜುವೆಲಿಯಾ ಅವರೊಂದಿಗೆ ಚರ್ಚಿಸಿದೆ. ಪಾರ್ಸೆಲ್‌ ಸರಕು ರೈಲಿನಲ್ಲಿ ಸಾಗಿಸುವ ಬಗ್ಗೆ ನಾವು ನಿರ್ಧರಿಸಿದ್ದೇವೆ. ಮುಂಬೈನ ಲುಧಿಯಾನ ಮತ್ತು ಬಾಂದ್ರಾ ನಡುವೆ ಓಡುತ್ತಿರುವ ರೈಲು ಅನ್ನು ರಾಜಸ್ಥಾನದ ಫಾಲಾ° ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅಲ್ಲಿ ನಿಗದಿತ ನಿಲುಗಡೆ ಇಲ್ಲವಾದರೂ, ಪ್ಯಾಕೇಜ್‌ ಅನ್ನು ಫ‌ಲಾ°ದಿಂದ ತೆಗೆದುಕೊಂಡು ಮುಂಬಯಿಯ ಮಹಿಳೆಗೆ ತಲುಪಿಸಲಾಯಿತು ಎಂದು ಮುಖ್ಯ ಪ್ರಯಾಣಿಕರ ಸಂಚಾರ ನಾರ್ತ್‌ ವೆಸ್ಟರ್ನ್ ರೈಲ್ವೆ (ಎನ್‌ಡಬ್ಲ್ಯುಆì) ವ್ಯವಸ್ಥಾಪಕ ತರುಣ್‌ ಜೈನ್‌ ಪಿಟಿಐಗೆ ತಿಳಿಸಿದ್ದಾರೆ.

ಪ್ರಾಧಿಕಾರದಿಂದ ಸೂಕ್ತ ಅನುಮತಿ ಪಡೆದ ಅನಂತರ, ರೈಲನ್ನು ನಿಲ್ಲಿಸಲಾಯಿತು ಮತ್ತು ಒಂಟೆಯ ಹಾಲನ್ನು ಬಾಂದ್ರಾದಲ್ಲಿ ಮಹಿಳೆಗೆ ತಲುಪಿಸಲಾಯಿತು. ಭಾರತೀಯ ರೈಲ್ವೆಯಲ್ಲಿ ನಮಗೆ, ವಾಣಿಜ್ಯ ಲಾಭಗಳನ್ನು ನೋಡುವ ಸಮಯ ಇದಲ್ಲ. ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಸಹಾಯ ಮಾಡಲು ಕೇಳಿಕೊಳ್ಳಲಾಗಿದೆ. ನಮ್ಮ (ಎನ್‌ಡಬ್ಲ್ಯುಆ) ರೈಲುಗಳು ದೇಶದ 18 ಜಿಲ್ಲೆಗಳ ಮೂಲಕ ಚಲಿಸುತ್ತವೆ ಮತ್ತು ಜನರಿಗೆ ಸಹಾಯ ಮಾಡಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಜೈನ್‌ ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next