Advertisement

ಅಕ್ರಮ ರಾಗಿ ಶೇಖರಣೆ ದಾಸ್ತಾನು ಮೇಲೆ ದಾಳಿ: 2700 ಮೂಟೆ ರಾಗಿ ವಶ

10:44 AM Jul 21, 2022 | Team Udayavani |

ಕುಣಿಗಲ್: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ರಾಗಿ ಕಾಳು ದಸ್ತಾನಿನ ಮೇಲೆ  ತಹಶೀಲ್ದಾರ್ ಮಹಬಲೇಶ್ವರ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 2700 ಕ್ಕೂ ಅಧಿಕ ರಾಗಿ ಮೂಟೆಯನ್ನು  ಗುರುವಾರ ವಶಪಡಿಸಿಕೊಂಡಿದ್ದಾರೆ.

Advertisement

ತಾಲೂಕಿನ ಎಡಿಯೂರಿನಲ್ಲಿ  ಅಕ್ರಮವಾಗಿ ರಾಗಿ ಕಾಳ ದಾಸ್ತಾನು ಸಂಗ್ರಹದ ಬಗ್ಗೆ ಸಲ್ಲಿಕೆಯಾದ ದೂರಿನ ಅನ್ವಯ ತಹಶೀಲ್ದಾರ್ ಮಹಬಲೇಶ್ವರ  ಹಾಗೂ ಅವರ ಸಿಬ್ಬಂದಿಗಳು ದಾಸ್ತಾನಿನ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಬೈಂದೂರು ಸಹಕಾರಿ ಸಂಘದ ಶಿರೂರು ಕರಾವಳಿ ಶಾಖೆ ಬೀಗ ಮುರಿದು ಕಳ್ಳತನ

ದಾಸ್ತಾನಿನಲ್ಲಿ ಅಕ್ರಮವಾಗಿ ರಾಗಿ ಶೇಖರಿಸಿರುವುದು ಕಂಡುಬಂದಿದ್ದು, 50 ಕೆ.ಜಿ ತುಂಬಿದ ಸುಮಾರು 2700 ಕ್ಕೂ ಅಧಿಕ ರಾಗಿ ಮೂಟೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next