Advertisement

ರಸಗೊಬ್ಬರ ಅಂಗಡಿ ಮೇಲೆ ದಾಳಿ: ಪರವಾನಗಿ ಇಲ್ಲದ ಕೀಟನಾಶಕ ವಶ

09:28 PM Jul 24, 2023 | Team Udayavani |

ಕೊರಟಗೆರೆ: ಪರವಾನಗಿ ಪಡೆಯದೆ ಅನಧಿಕೃತವಾಗಿ ಕೀಟನಾಶಕ ಮಾರಾಟ ಮಾಡುತ್ತಿದ್ದ ಹಾಗೂ ಬಿಲ್ ಇಲ್ಲದೆ ರಸಗೊಬ್ಬರ ದಾಸ್ತಾನು ಮಾಡಿದ್ದ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆಯ ಜಾರಿ ದಳ ಅಧಿಕಾರಿ ಪುಟ್ಟರಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಪರವಾನಗಿ ಇಲ್ಲದ ಕೀಟನಾಶಕಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Advertisement

ಕೊರಟಗೆರೆ ತಾಲೂಕು ಜೋನಿಗರಹಳ್ಳಿಯ ಸಿದ್ದೇಶ್ವರಸ್ವಾಮಿ ಫರ್ಟಿಲ್ಯೆಸರ್ಸ್ ಅಂಗಡಿಯಲ್ಲಿ ಆಕ್ರಮವಾಗಿ ಕೀಟನಾಶಕ ಹಾಗೂ ಬಿಲ್ ಇಲ್ಲದೆ ರಸಗೊಬ್ಬರ ಸಾಗಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕೇಳಿ ಬಂದ ದೂರಿನ ಮೇರೆಗೆ ಕೃಷಿ ಇಲಾಖೆಯ ಜಾರಿದಳದ ಸಹಾಯಕ ನಿರ್ದೇಶಕ ಹಾಗೂ ರಸಗೊಬ್ಬರ ಪರಿವೀಕ್ಷಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಕೊರಟಗೆರೆ ಕೃಷಿ ಸಹಾಯಕ ನಿರ್ದೇಶಕ ನಾಗರಾಜು, ತೋವಿನಕೆರೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಜಿ.ಎಂ.ನರಸಿಂಹಮೂರ್ತಿ ಅವರು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಬಿಲ್ ಹಾಕದೆ 60 ಚೀಲ ಯೂರಿಯಾ ಕಳುಹಿಸಿರುವ ಬಗ್ಗೆ, ರಸಗೊಬ್ಬರ ದರಪಟ್ಟಿ ಪ್ರದರ್ಶಿಸದಿರುವ ಬಗ್ಗೆ, ವಿವಿಧ ರಸಗೊಬ್ಬರಗಳ ಹಾಲಿ ದಾಸ್ತಾನು ವ್ಯತ್ಯಾಸ ಹಾಗೂ ಪರವಾನಗಿ ಪಡೆಯದೇ ವಿವಿಧ ಸರಬರಾಜುದಾರರಿಂದ ಅನಧಿಕೃತವಾಗಿ ಕೀಟನಾಶಕಗಳನ್ನು ಖರೀದಿಸಿ ದಾಸ್ತಾನುಮಾಡಿ ದಾಖಲೆ ಇಲ್ಲದೆ ವ್ಯಾಪಾರ ಮಡುತ್ತಿರುವುದು ಪತ್ತೆಯಾಗಿದ್ದು, ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಸುಮಾರು ೨೦ ಸಾವಿರಕ್ಕೂ ಅಧಿಕ ಮೌಲ್ಯದ ವಿವಿಧ ಕೀಟನಾಶಕಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸದರಿ ಅಂಗಡಿಯವರ ಬಗ್ಗೆ ಕೇಳಿದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಸಹ ಜಾರಿ ಮಾಡಿದ್ದು, ಅವರು ನೀಡಿರುವ ಲಿಖಿತ ಸಮಜಾಯಿಷಿ, ಸಮಂಜಸವಾಗಿಲ್ಲದ ಕಾರಣ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಾರಿದಳ ಅಧಿಕಾರಿ ಪುಟ್ಟರಂಗಪ್ಪ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next