Advertisement

ರಾಯಚೂರು: ಮತ್ತೆ ಆರು ಜನರಿಗೆ ಪಾಸಿಟಿವ್‌

11:42 AM Jun 29, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ರವಿವಾರ ಮತ್ತೆ 6 ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಜಿಲ್ಲೆಯಿಂದ 254 ಶಂಕಿತರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇವದುರ್ಗ 81, ಲಿಂಗಸುಗೂರು 30, ಮಾನ್ವಿ 28, ಸಿಂಧನೂರು 26 ಮತ್ತು ರಾಯಚೂರು ತಾಲೂಕಿನಿಂದ 89 ಮಾದರಿಗಳನ್ನು ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ ವರದಿಗಳಲ್ಲಿ 665 ನೆಗೆಟಿವ್‌ ಆಗಿವೆ. ಈವರೆಗೆ 22,385 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗಾಗಿ ಕಳುಹಿಸಿದ್ದು, 20,763 ವರದಿಗಳು ನೆಗೆಟಿವ್‌ ಬಂದಿವೆ. ಉಳಿದ 1,147 ಮಾದರಿಗಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿ ರವಿವಾರ 311 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಈವರೆಗೆ 469 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, 400 ಜನಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಿವಿಧ ಸಾಂಸ್ಥಿಕ ಕ್ವಾರಂಟೈನ್‌ ಗಳಲ್ಲಿ 175 ಜನರನ್ನು ಇರಿಸಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

23 ಪ್ರಕರಣ ದಾಖಲು: ಕೋವಿಡ್‌-19 ನಿಯಮಗಳನ್ನು ಉಲ್ಲಂಘಿಸಿದ ವಿವಿಧ ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 28 ಪ್ರಕರಣ ದಾಖಲಿಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ. ಸದರ್‌ ಬಜಾರ್‌ ಠಾಣೆ ವ್ಯಾಪ್ತಿಯ ಪಟೇಲ ರಸ್ತೆಯಲ್ಲಿರುವ ಚಾಕೊಲೆಟ್‌ ಮತ್ತು ಬಿಸ್ಕಿಟ್‌ ಅಂಗಡಿ, ಉಸ್ಮಾನಿಯಾ ಮಸೀದಿ ಪಕ್ಕದ ಕಿರಾಣಿ ಸ್ಟೋರ್‌, ನೇತಾಜಿ ಠಾಣೆ ವ್ಯಾಪ್ತಿಯ ಪಟೇಲ ವೃತ್ತದ ಬಳಿಯ ರಾಘವೇಂದ್ರ ಜರಲ್‌ ಸ್ಟೋರ್‌, ಮಸ್ಕಿ ಪಟ್ಟಣದ ಮಯೂರ ಹೋಟೆಲ್‌, ಮಾನ್ವಿ ಬಸ್‌ ನಿಲ್ದಾಣ ಎದುರಿನ ಹೋಟೆಲ್‌, ತುರ್ವಿಹಾಳ ಪಟ್ಟಣದ ಸುಂಕಲಮ್ಮ ಗುಡಿ ಹತ್ತಿರದ ಹಾಲಿನ ಅಂಗಡಿ, ಹಟ್ಟಿ ಪಟ್ಟಣದ ಫರ್ನಿಚರ್‌ ಅಂಗಡಿ, ಬಳಗಾನೂರ ಪಟ್ಟಣದ ಎಗ್‌ ರೈಸ್‌ ಅಂಗಡಿ ಸೇರಿ ಜಿಲ್ಲಾದ್ಯಂತ 23 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next