Advertisement

Raichur; ಅಂಗವಿಕಲರಿಂದ ಲಂಚ ಪಡೆಯುತ್ತಿದ್ದ ಎಂಆರ್‌ಡಬ್ಲ್ಯೂ ಲೋಕಾಯುಕ್ತ ಬಲೆಗೆ

07:52 PM Jul 11, 2024 | Team Udayavani |

ರಾಯಚೂರು: ಅಂಗವಿಕಲರಿಗೆ ತ್ರಿಚಕ್ರ ವಾಹನ ಮಂಜೂರು ಮಾಡಿಸುವುದಾಗಿ ಲಂಚ ಪಡೆಯುತ್ತಿದ್ದ ಮಾನ್ವಿ ತಾಲೂಕಿನ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (Multi-Purpose Rehabilitation Worker) ಹನುಮಂತು ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Advertisement

ಲಕ್ಷ್ಮಣ ಎನ್ನುವ ವಿಕಲಚೇತನರಿಂದ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದು, ಐದು ಸಾವಿರ ರೂ.ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 80 ಸಾವಿರ ರೂ. ಮೌಲ್ಯದ ವಾಹನ ಮಂಜೂರಿಗೆ 20 ಸಾವಿರ ರೂ. ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದ ಎಂದು ದೂರುದಾರ ತಿಳಿಸಿದ್ದಾರೆ. ಸರ್ಕಾರದ ಅಂಗವಿಕಲರ ಕಲ್ಯಾಣ ಇಲಾಖೆಯ ಅಧೀನವಾಗಿ ಕೆಲಸ ಮಾಡುವ ಸಂಸ್ಥೆಯ ಕಾರ್ಯಕರ್ತರಿಗೆ ಸರ್ಕಾರವೇ ವೇತನ ಪಾವತಿಸುತ್ತದೆ. ಹನುಮಂತುನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಶಶಿಧರ, ಡಿಎಸ್‌ಪಿ ರಘು, ಇನ್ಸಪೆಕ್ಟರ್ ಅಮರೇಶ ಹುಬ್ಬಳಿ, ಕಾಳಪ್ಪ ಬಡಿಗೇರ್ ಸೇರಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next