Advertisement

Raichur: ಶಾಸಕ ದದ್ದಲ್ ಅಳಿಯನ ತೀವ್ರ ವಿಚಾರಣೆ, ಕಾರುಗಳ ತಪಾಸಣೆ

01:11 PM Jul 10, 2024 | Team Udayavani |

ರಾಯಚೂರು: ಕಾಂಗ್ರೆಸ್  ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಶಾಸಕರ ಪತ್ನಿ, ಅಳಿಯನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಬೆಳಗ್ಗೆ 7 ಗಂಟೆಗೆ ಶುರುವಾದ ದಾಳಿ ಸತತ 6 ಗಂಟೆಗಳಿಂದ‌ ನಿರಂತರವಾಗಿ ನಡೆಯುತ್ತಿದೆ.

ಶಾಸಕ ಬಸನಗೌಡ ದದ್ದಲ್ ಬೆಂಗಳೂರು ನಿವಾಸದಲ್ಲಿ ಉಳಿದುಕೊಂಡಿದ್ದು, ನಗರದ ಮನೆಯಲ್ಲಿ ಅವರ ಪತ್ನಿ & ಅಳಿಯ ಸೇರಿ ಕೆಲಸಗಾರರು ಮಾತ್ರ ಇದ್ದರು.

ಅಧಿಕಾರಿಗಳು ದದ್ದಲ್ ಅಳಿಯ ಚನ್ನಬಸವರನ್ನು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಅವರನ್ನು ಒಂಟಿಯಾಗಿ ಬಿಡದೆ ವಿಚಾರಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮನೆಯ ಸದಸ್ಯರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೇ ಬಸನಗೌಡ ದದ್ದಲ್ ರ ಕಾರುಗಳನ್ನು ಕೂಡ ಶೋಧಿಸಲಾಗಿದೆ.

ಇನೋವಾ ಕ್ರಿಸ್ಟಾ, ಮಹಿಂದ್ರಾ ಸ್ಕಾರ್ಪಿಯೊ ಕಾರುಗಳಲ್ಲಿ ತಪಾಸಣೆ ಮಾಡಲಾಯಿತು. ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಧಿಕಾರಿಗಳ ಜೊತೆ ಸಿ.ಆರ್.ಪಿ.ಎಫ್. ಭದ್ರತಾ ಸಿಬ್ಬಂದಿ ಕೂಡ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next