Advertisement

ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಪ್ರತಿಭಟನೆ; ಬಿಡುಗಡೆಗೆ ಆಗ್ರಹ

06:06 PM Jun 12, 2020 | sudhir |

ರಾಯಚೂರು: ಸೂಕ್ತ ಚಿಕಿತ್ಸೆ, ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಇಲ್ಲಿನ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರು ದಿಢೀರ್ ಪ್ರತಿಭಟನೆ ನಡೆಸಿದರು.

Advertisement

ಇದರಿಂದ ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಮಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ನಮ್ಮ ಕೋವಿಡ್ ವರದಿ ಬಗ್ಗೆ ಕೂಡ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸಿ, ಇಲ್ಲವೇ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ವಾಗ್ವಾದ ನಡೆಸುತ್ತಿದ್ದಾರೆ.

ಆಸ್ಪತ್ರೆಯಿಂದ ಹೊರಬರಲು ಯತ್ನಿಸಿದ ಕಾರಣಕ್ಕೆ ಗೇಟ್ ಬಂದ್ ಮಾಡುವ ಸೋಂಕಿತರನ್ನು ಗೇಟ್ ಬಳಿ ತಡೆಯಲಾಗಿದೆ. ಹೊರಗಡೆ ಬರದಂತೆ ಪೊಲೀಸರು ಮೈಕ್ ನಲ್ಲಿ ಎಚ್ಚರಿಕೆ ನೀಡಿದರು. ಆದರೆ ಸೋಂಕಿತರು ಮಾತ್ರ ಗೇಟ್ ಬಳಿಯೇ ಗುಂಪಾಗಿ ಸೇರಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಉದ್ವಿಘ್ನ ಪರಿಸ್ಥಿತಿ ಉಲ್ಬಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next