Advertisement

ರಾಯಚೂರು ವಿಮಾನ ನಿಲ್ದಾಣ ಸುಗಮ

01:32 PM Dec 01, 2019 | Suhan S |

ರಾಯಚೂರು: ಸಮೀಪದ ಯರಮರಸ್‌ ಬಳಿ ವಿಮಾನ ನಿಲ್ದಾಣಕ್ಕೆ ವೈಟಿಪಿಎಸ್‌ ಚಿಮಣಿ ಅಡ್ಡಿಯಾಗಿದ್ದು, ಮಾರ್ಗಬದಲಿಸಿದರೆ ನಿಲ್ದಾಣಕ್ಕೆ ಇದು ಸೂಕ್ತ ಸ್ಥಳ ಎಂದು ಕರ್ನಾಟಕರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ವೈಮಾನಿಕ ವಿಭಾಗದ ಅಧಿಕಾರಿ ಕ್ಯಾ.ಶಮಂತ್‌ ತಿಳಿಸಿದ್ದಾರೆ.

Advertisement

ಸಮೀಪದ ಯರಮರಸ್‌ ಬಳಿ ಉದ್ದೇಶಿತ ವಿಮಾನನಿಲ್ದಾಣ ಸ್ಥಳವನ್ನು ಶನಿವಾರ ಪರಿಶೀಲಿಸಿದ ಬಳಿಕ ನಿಲ್ದಾಣಸ್ಥಳಾಂತರಕ್ಕೆ ನಿಗದಿ ಮಾಡಿದ ಸಿಂಗನೋಡಿಗೂಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ವರದಿ ಪಡೆದರು. ಯರಮರಸ್‌ ವಿಐಪಿ ಸರ್ಕ್ನೂಟ್‌ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕ್ಯಾ. ಶಮಂತ್‌, ಉದ್ದೇಶಿತನಿಲ್ದಾಣ ಸ್ಥಳ ಕುರಿತು ಮಾಹಿತಿ ಪಡೆದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಮೂಲನಕ್ಷೆ ವೀಕ್ಷಿಸಿದರು. ನಕ್ಷೆ ಪ್ರಕಾರ ನಿಲ್ದಾಣ ನಿರ್ಮಿಸಿದರೆ ವೈಟಿಪಿಎಸ್‌ ಚಿಮಣಿ ಅಡ್ಡಿಯಾಗುವ ಸಾಧ್ಯತೆ ಇದೆ. ಆದರೆ, ಇನ್ನೂ ಸಾಕಷ್ಟು ಸ್ಥಳಾವಕಾಶವಿದ್ದು, ಮಾರ್ಗ ಬದಲಾವಣೆಗೆ ಅವಕಾಶವಿದೆ ಎಂದರು.

ಖಾಸಗಿ ನಿಲ್ದಾಣವಾಗಿದ್ದರೆ ಅನಾಯಾಸವಾಗಿ ನಿರ್ಮಿಸಬಹುದು. ಆದರೆ, ಇದು ನಾಗರಿಕಸೇವೆಯ ಉದ್ದೇಶಕ್ಕೆ ನಿರ್ಮಿಸುತ್ತಿರುವ ಕಾರಣ ಎಲ್ಲಆಯಾಮಗಳಿಂದಲೂ ಪರಿಶೀಲಿಸಬೇಕಿದೆ. ವೈಟಿಪಿಎಸ್‌ ಚಿಮಣಿ ಕಾರಣಕ್ಕೆ ನಿಲ್ದಾಣವನ್ನೇ ಸ್ಥಳಾಂತರಿಸುವಅನಿವಾರ್ಯತೆ ಕಂಡು ಬರುತ್ತಿಲ್ಲ.ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ನಿಲ್ದಾಣ ನಿರ್ಮಿಸಲು ಈಸ್ಥಳ ಪ್ರಶಸ್ತವಾಗಿದೆ ಎಂದರು.

ನೀಲನಕ್ಷೆ ಪ್ರಕಾರ ಉತ್ತರ ದಕ್ಷಿಣಾಭಿಮುಖವಾಗಿ ನಿಲ್ದಾಣ ನಿರ್ಮಿಸುವ ಯೋಜನೆಯಿದೆ. ಹಾಗೆ ನಿರ್ಮಿಸಲು ಚಿಮಣಿ ಅಡ್ಡಿಯಾಗುತ್ತಿದೆ. ಅದರ ಬದಲಿಗೆ ಪೂರ್ವಪಶ್ಚಿಮಾಭಿಮುಖವಾಗಿ ನಿಲ್ದಾಣ ನಿರ್ಮಿಸಲು ಅವಕಾಶವಿದೆ ಎಂದರು. ಸ್ಥಳದಲ್ಲಿದ್ದ ಲೋಕೋಪಯೋಗಿ ಎಂಜಿನಿಯರ್‌ ಪ್ರಕಾಶ, ನಿಲ್ದಾಣಕ್ಕಾಗಿ ಭೂ ಸ್ವಾಧೀನಮಾಡಿಕೊಂಡಾಗ ಇಲ್ಲಿ ಯಾವುದೇ ಅಡಚಣೆಗಳಿರಲಿಲ್ಲ. ಹಂತ ಹಂತವಾಗಿಕೈಗಾರಿಕೆಗಳು ಹುಟ್ಟಿಕೊಂಡಿವೆ. ವೈಟಿಪಿಎಸ್‌ ಕೂಡಈಚೆಗೆ ನಿರ್ಮಾಣವಾಗಿದ್ದು, ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು.

ಕ್ಯಾ.ಶಮಂತ್‌ ಪ್ರತಿಕ್ರಿಯಿಸಿ, ವೈಟಿಪಿಎಸ್‌ ಚಿಮಣಿ ಅಡ್ಡಿಯಾಗದಂತೆ ಮಾರ್ಗ ಬದಲಾಯಿಸಿದರೆ ಮತ್ತೂಂದು ಬದಿ ವಿದ್ಯುತ್‌ ಕಂಬಗಳು ಅಡ್ಡಿಯಾಗುವಸಾಧ್ಯತೆಗಳಿವೆ. ಕನಿಷ್ಟ 2.2 ಕಿಮೀವರೆಗೂರನ್‌ವೇ ಬೇಕಾಗುತ್ತದೆ. ಅದಕ್ಕೆ ಯಾವುದೇ ಅಡಚಣೆಗಳಿರಬಾರದು ಎಂದರು.

Advertisement

ಕೆಪಿಟಿಸಿಎಲ್‌ ಅಧಿಕಾರಿ ಪ್ರತಿಕ್ರಿಯಿಸಿ, 110, 210 ಕೆವಿ ವಿದ್ಯುತ್‌ ಕಂಬಗಳು ಹಾದು ಹೋಗಿವೆ. ಎಷ್ಟು ಕಂಬಗಳನ್ನು ಸ್ಥಳಾಂತರಿಸಬೇಕು ಎಂಬುದನ್ನು ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಒಂದೇ ಕಂಬ ಬದಲಿಸುವುದು ಕಷ್ಟ. ಕನಿಷ್ಟ ನಾಲ್ಕೈದು ಕಂಬಗಳಾದರೂಸ್ಥಳಾಂತರ ಮಾಡಬೇಕಾಗುತ್ತದೆ ಎಂದರು. ಕ್ಯಾ.ಶಮಂತ್‌ ಪ್ರತಿಕ್ರಿಯಿಸಿ, ಈಗಲೇ ಹೇಳುವುದು ಕಷ್ಟ.

ನಮ್ಮ ತಾಂತ್ರಿಕ ತಂಡ ಬಂದು ಪರಿಶೀಲನೆ ನಡೆಸಲಿದೆ. ಆಗ ಮಾರ್ಗ ಬದಲಾವಣೆ ಕಂಬಗಳ ಸ್ಥಳಾಂತರ ಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಬಹುದು. ಅದರ ಅಂದಾಜು ಮೊತ್ತ ಎಷ್ಟಾಗಬಹುದು ಎಂಬುದು ಕೂಡ ಆ ಮೇಲೆಯೇ ತಿಳಿಯಲಿದೆ ಎಂದರು.

ಸ್ಥಳದಲ್ಲಿದ್ದ ಸರ್ವೇ ಅಧಿಕಾರಿ ಅನಿಲಕುಮಾರಪ್ರತಿಕ್ರಿಯಿಸಿ, ಈಗಾಗಲೇ ಸ್ವಾ ಧೀನಪಡಿಸಿಕೊಂಡ ಎಲ್ಲ ಸ್ಥಳದ ಸರ್ವೆ ಮಾಡಿದ್ದು, ಗಡಿ ಗುರುತಿಸಲಾಗಿದೆ ಎಂದರು. ಎಡಿಸಿ ದುರುಗೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್‌ ಡಾ| ಹಂಪಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next