Advertisement

ಊಟ ನಿಲ್ಲಿಸಿಲು ಸಿಎಂಗೆ ರೈ ಪತ್ರ; ಬಿಜೆಪಿಯಿಂದ ಬಹಿರಂಗ

01:43 PM Dec 13, 2017 | Team Udayavani |

ಮಂಗಳೂರು: ಕಲ್ಲಡ್ಕ ಶ್ರೀರಾಮ ಕೇಂದ್ರದ ವಿದ್ಯಾರ್ಥಿಗಳ ಊಟಕ್ಕಾಗಿ  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ ನೀಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ  ಸಚಿವ ರಮನಾಥ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಕುರಿತು  ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್‌ ಅವರು ಬುಧವಾರ ದಾಖಲೆ ಬಿಡುಗಡೆ ಮಾಡಿ ಕಿಡಿ ಕಾರಿದ್ದಾರೆ.

Advertisement

ಇತ್ತೀಚೆಗೆ ಬಿಜೆಪಿ  ಸೇರ್ಪಡೆಯಾಗಿರುವ ಹರಿಕೃಷ್ಣ ಅವರು ಸುದ್ದಿಗಾರರರೆದುರು ರೈ ಅವರು ಪತ್ರ ಬರೆದಿರುವ ಕುರಿತು ದಾಖಲೆ ಬಿಡುಗಡೆ ಮಾಡಿ ಕಿಡಿ ಕಾರಿದರು.

 

‘ರೈ ಅವರು ಮಕ್ಕಳ ಊಟ ಕಸಿದುಕೊಂಡು ಅರಣ್ಯ ಇಲಾಖೆಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕಳಂಕ ತಂದಿದ್ದಾರೆ’ ಎಂದರು. 

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರವನ್ನು ದತ್ತು ತೆಗೆದುಕೊಂಡು 2007ರಿಂದ ನೀಡಲಾಗುತ್ತಿದ್ದ ಅನುದಾನವನ್ನು ರಾಜ್ಯ ಸರಕಾರ
 ರದ್ದುಪಡಿಸಿತ್ತು. 

ಅನುದಾನ ರದ್ದು ಪಡಿಸಿದ ಹಿಂದೆ ರಮನಾಥ ರೈ ಅವರ ಕುಮ್ಮಕ್ಕು ಇತ್ತು ಎಂದು  ಪ್ರಭಾಕರ್‌ ಭಟ್‌ ಮತ್ತು ಬಿಜೆಪಿ ಆರೋಪಿಸಿತ್ತು. 

Advertisement

ಅನುದಾನ ರದ್ದಾದ ಬಳಿಕ ವಿದ್ಯಾ ಕೇಂದ್ರದ ಸಾವಿರಾರು ಮಕ್ಕಳು ಬೀದಿಗಿಳಿದು ಖಾಲಿ ಬಟ್ಟಲು ಬಡಿದು ಆಕ್ರೋಶ ಹೊರಹಾಕಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next