Advertisement

ರಾಹುಲ್, ಸಿದ್ದರಾಮಯ್ಯಗೆ ಅಸ್ತಿತ್ವ ಇಲ್ಲ, ಡಿಕೆಶಿ ದೊಡ್ಡ ನಾಯಕರಲ್ಲ; ಶ್ರೀರಾಮುಲು

10:08 AM Jun 25, 2019 | Team Udayavani |

ಚಿತ್ರದುರ್ಗ : ಮಾಜಿ ಸಿಎಂ ಸಿದ್ದರಾಮಯ್ಯ ಸೋಲುವ ಭಯದಿಂದ ಬಾದಾಮಿಗೆ ಬಂದರು, ದೇವೇಗೌಡರು ಹಾಸನದಿಂದ ತುಮಕೂರಿಗೆ ಬಂದರು, ರಾಹುಲ್ ಗಾಂಧಿ ಅಮೇಠಿಯಿಂದ ವಯನಾಡ್ ಗೆ ಬಂದರು. ಈ ನಾಯಕರಿಗೆ ಅವರ ಕ್ಷೇತ್ರಗಳ ಸಂಬಂಧ ಮುಗಿತಾ ಎಂದು ಡಿಕೆ ಶಿವಕುಮಾರ್ ಕೇಳಲಿ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಪ್ರಶ್ನಿಸಿದ್ದಾರೆ.

Advertisement

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 25 ಎಂಪಿ ಗೆದ್ದಿದ್ದೇವೆ,‌ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಇಲ್ಲ. ದೇಶದಲ್ಲಿ ರಾಹುಲ್ ಗಾಂಧಿಗೆ ಅಸ್ತಿತ್ವ ಇಲ್ಲ, ರಾಜ್ಯದಲ್ಲಿ ಸಿದ್ದರಾಮಯ್ಯಗೆ ಅಸ್ತಿತ್ವ ಇಲ್ಲ ಎಂದರು.

ಬಾಯಿ ಚಪಲಕ್ಕೆ ಸಿದ್ದರಾಮಯ್ಯ ಮಾತನಾಡುತ್ತಾರೆ ರಾಜ್ಯದ ಜನರು ಉತ್ತರ ನೀಡಿದ್ದಾರೆ. ಮಧ್ಯಂತರ ಚುನಾವಣೆ ಬಂದರೆ 160 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಗೆದ್ದ ಸ್ಥಾನಕ್ಕಿಂತ ಕಡಿಮೆ ಸ್ಥಾನ ಗೆಲ್ಲುತ್ತೇವೆ ಎಂದು ಚುನಾವಣೆ ಬೇಡ ಅಂತಾರೆ. ಮೈತ್ರಿಯಲ್ಲಿ ತುಂಬಾ ಗೊಂದಲ ಗಳಿಗೆ ಇದನ್ನ ಪ್ಯಾಚಪ್ ಮಾಡಲು ಹೇಳಿಕೆ ನೀಡುತ್ತಾರೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next