Advertisement

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

11:53 PM Jul 06, 2024 | Team Udayavani |

ಗಾಂಧೀನಗರ: “ಪ್ರಧಾನಿ ನರೇಂದ್ರ ಮೋದಿ ಅಯೋ ಧ್ಯೆಯಿಂದಲೇ ಲೋಕಸಭೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿದ್ದರು. ಆದರೆ ಅಲ್ಲಿ ಸ್ಪರ್ಧಿಸಿ ದರೆ ಸೋಲು ಖಚಿತ ಎಂಬ ಸಮೀಕ್ಷೆಯಲ್ಲಿ ಗೊತ್ತಾಗಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಕಾರಣಕ್ಕೆ ಅವರು ಅಲ್ಲಿಂದ ಸ್ಪರ್ಧೆ ಮಾಡಲಿಲ್ಲ ಎಂದರು.

Advertisement

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿ, ನಮ್ಮನ್ನು ಬೆದರಿಸಿ ಬಿಜೆಪಿ ಸವಾಲೊಡ್ಡಿದೆ’ ಎಂದರು.

ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಆ ಪಕ್ಷದ ಭದ್ರಕೋಟೆ ಆಗಿರುವ ಗುಜರಾತ್‌ನಲ್ಲಿ 2027 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಮಣಿಸುತ್ತೇವೆ. ಈ ಮೂಲಕ ರಾಜ್ಯದಲ್ಲಿ ಹೊಸ ಆರಂಭಕ್ಕೆ ಕಾರಣರಾಗು ತ್ತೇವೆ ಎಂದು ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಿಜೆಪಿ ಸ್ಥಳೀಯರ ಜಮೀನು ಪಡೆದಿದೆ. ಆದರೆ ಪರಿಹಾರ ನೀಡಿಲ್ಲ. ಮಂದಿರ ಉದ್ಘಾಟನೆಯಲ್ಲೂ ಒಬ್ಬ ಅಯೋಧ್ಯೆಯ ಒಬ್ಬ ಪ್ರಜೆಗೂ ಅವಕಾಶ ನೀಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಸೋತಿದೆ ಎಂದೂ ರಾಹುಲ್‌ ಟೀಕಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next