Advertisement

ಪ್ರಧಾನಿ ಮೋದಿ ಶ್ರೀಮಂತರ ಚೌಕಿದಾರ್‌

12:04 PM Apr 14, 2019 | keerthan |

ಕೋಲಾರ: ಪ್ರಧಾನಿ ನರೇಂದ್ರ ಮೋದಿ ರಫೇಲ್‌ ಡೀಲ್‌ನಲ್ಲಿ ಜನತೆಯ 30 ಸಾವಿರ ಕೋಟಿ ರೂ.ಅನ್ನು ಅನಿಲ್‌ ಅಂಬಾನಿಗೆ ಕೊಟ್ಟು ದೇಶಭಕ್ತ ಎಂದು ಹೇಳಿಕೊಳ್ಳುತ್ತಾರೆ. ಕಳ್ಳತನ ಮಾಡುವರೆಂದಿಗೂ ದೇಶಭಕ್ತರಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ವಾಗ್ಧಾಳಿ ನಡೆಸಿದರು.

Advertisement

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕಾಂಗ್ರೆಸ್‌ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಕೇವಲ 15 ಮಂದಿಗೆ ಪ್ರಧಾನಿಯಾಗಿದ್ದಾರೆ. ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಶ್ರೀಮಂತರ ಪಾಲಿಗೆ ಚೌಕಿದಾರ್‌ ಆಗಿದ್ದಾರೆ ಎಂದು ಟೀಕಿಸಿದರು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದ್ವೇಷ ಬಿತ್ತಿ, ದೇಶವನ್ನು ಒಡೆಯುವ ವಿಚಾರಧಾರೆಗಳನ್ನು ಜನರ ಮುಂದಿಟ್ಟಿದ್ದಾರೆ. ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ಒಟ್ಟಿಗೆ ಸೇರಿ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿರಿಸಲಾಗಿದೆ. ದೇಶದಲ್ಲಿ ಇದೀಗ ಚುನಾವಣೆ ನಡೆಯುತ್ತಿರುವುದುಈ ಎರಡು ವಿಚಾರಗಳಿಗಾಗಿ ಎಂದು ಹೇಳಿದರು. 2014ರಲ್ಲಿ ಮೋದಿ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ, ವಿದೇಶದ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ತಂದು ಭಾರತದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಅನ್ನು ಜಮಾ ಮಾಡುವುದಾಗಿ ಮತ್ತು ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿ ಅಧಿಕಾರವನ್ನು ಪಡೆದರು. ಆದರೆ, ಅಧಿಕಾರಕ್ಕೆ ಬಂದ ನಂತರ ಇದೆಲ್ಲವನ್ನು ಮರೆತು 3 ಲಕ್ಷ ಕೋಟಿ ರೂ. ಶ್ರೀಮಂತರ ಬ್ಯಾಂಕ್‌ ಸಾಲ ಮನ್ನಾ ಮಾಡಿದರು ಎಂದು ಆರೋಪಿಸಿದರು.

ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ 15 ಲಕ್ಷ ರೂ. ಬಗ್ಗೆ ಪ್ರಸ್ತಾಪಿಸಿ, ಆ ಭರವಸೆಯೇನಿದ್ದರೂ ಚುನಾವಣೆ ನಿಮಿತ್ತ ಮಾತ್ರ ನೀಡಿದ್ದು ಎಂದು ಹೇಳಿಕೆ ಕೊಡುತ್ತಾರೆ ಎಂದು ದೂರಿದರು.

ದೇಶದ ಜನರಿಗೆ ವಂಚನೆ: ಪ್ರಸಕ್ತ ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿ ನಿರುದ್ಯೋಗ ನಿವಾರಣೆ, 15 ಲಕ್ಷ ರೂ. ಬಗ್ಗೆ, ರೈತರ ಸಾಲ ಮನ್ನಾ ಬಗ್ಗೆ ಚಕಾರವೆತ್ತುತ್ತಿಲ್ಲ. ಚುನಾವಣೆ ಪ್ರಣಾಳಿಕೆಯಲ್ಲೂ ಉದ್ಯೋಗದ ಭರವಸೆ ನೀಡಿಲ್ಲ. ಕೇವಲ ಸುಳ್ಳುಗಳನ್ನು ಹೇಳುತ್ತಾ ಚೌಕಿದಾರ್‌ ಎಂದೇಳಿಕೊಂಡು ದೇಶ ಹಾಗೂ ಜನರನ್ನು ವಂಚಿಸುತ್ತಿದ್ದಾರೆ ಎಂದು ಕಟಕಿ ಯಾಡಿದರು.

Advertisement

ಮೋದಿ ಎಂಬ ಹೆಸರೇಕಿದೆ: ನೀರವ್‌ ಮೋದಿ, ಲಲಿತ್‌ ಮೋದಿ, ಚೋಕ್ಸಿ, ವಿಜಯಮಲ್ಯ, ಅಂಬಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದ ಕಳ್ಳರ ಕೂಟ ಜನರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ, ರೈತರ, ಬಡವರ, ಕಾರ್ಮಿಕರ ಹಣವನ್ನು ಲೂಟಿ ಮಾಡಿರುವುದು ಸ್ಪಷ್ಟವಾಗಿ ಜನತೆಯ ಕಣ್ಣಿಗೆ ಗೋಚರಿಸುತ್ತಿದೆ. ಸಾವಿರಾರು ಕೋಟಿ ರೂ. ಹಣವನ್ನು ಜನತೆಗೆ ಹಾಗೂದೇಶಕ್ಕೆ ವಂಚಿಸಿರುವ ಕಳ್ಳರ ಹೆಸರು ಬಹುತೇಕ ಮೋದಿ ಎಂದು ಏಕಿದೆ ಎಂದು ವ್ಯಂಗ್ಯವಾಡಿದರು.

ಗಬ್ಬರ್‌ಸಿಂಗ್‌ ಜಿಎಸ್‌ಟಿ: ಅನಿಲ್‌ ಅಂಬಾನಿಯನ್ನು ಆಲಂಗಿಸಿಕೊಳ್ಳುವ ಮತ್ತು ನೀರವ್‌ ಮೋದಿ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಪ್ರಧಾನಿ ಮೋದಿ ದೇಶದ ಬಡವರು, ರೈತರು, ಕಾರ್ಮಿಕರನ್ನು ಏಕೆ ಅಲಂಗಿಸಿ ಕೊಳ್ಳುವುದಿಲ್ಲ ಹಾಗೂ ಇವರ ಜೊತೆ ಏಕೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಅವರು, ನೋಟು ಅಮಾನ್ಯಿàಕರಣ ಹಾಗೂ ಜಿಎಸ್‌ಟಿ ಎಂಬ ನೆಪದಲ್ಲಿ ಬಡವರನ್ನು, ರೈತರನ್ನು, ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ ಗಬ್ಬರ್‌ ಸಿಂಗ್‌ ಜಿಎಸ್‌ಟಿ ರೂಪದಲ್ಲಿ ಬಹುದೊಡ್ಡ ಹೊಡೆದ ನೀಡಿದ್ದಾರೆ ಎಂದು ದೂರಿದರು. ಗಬ್ಬರ್‌ಸಿಂಗ್‌ ಟ್ಯಾಕ್ಸ್‌ ಹೆಸರಿನಲ್ಲಿ ಶೇ.28 ತೆರಿಗೆ ವಸೂಲಿ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ. ಹೋದಕಡೆಯಲ್ಲೆಲ್ಲಾ ಭಾಷಣದಲ್ಲಿ ಪೊಳ್ಳು ಭರವಸೆಗಳನ್ನು ನೀಡುತ್ತಿರುವ ಮೋದಿ ಕಳೆದ 5 ವರ್ಷದಲ್ಲಿ ಭಾರತದಲ್ಲಿ ನಿರುದ್ಯೋಗ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಜನರ ಮುಂದಿಡುತ್ತಿಲ್ಲ, 5 ವರ್ಷದ ಅಭಿವೃದ್ಧಿ ಜನರಿಗೆ ತಿಳಿಸುತ್ತಿಲ್ಲ. ಮೇಕ್‌ ಇನ್‌ ಇಂಡಿಯಾ, ಸ್ಟಾಂಡ್‌ ಅಫ್ಇಂಡಿಯಾ ಘೋಷಣೆಗಳನ್ನು ಮಾಡಿರುವ ಡೈಲಾಗ್‌ ಗಳನ್ನು ಕೇಳಿ ಯುವ ಜನತೆ ಬೇಸತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಮಿ ಅನಿಲ್‌ ಅಂಬಾನಿಗೆ ಸಹಸ್ರ ಕೋಟಿ ರೂ. ಸಾಲ ನೀಡಲಾಗಿದ್ದು, ಇನ್ನು ವಾಪಸ್‌ ಪಡೆದಿಲ್ಲ ಸಾಲ ಪಡೆದ ಖಾತೆಯನ್ನು ನಿರ್ವಹಣೆ ಮಾಡದೆ ಅದನ್ನು ಹಾಗೇ ಉಳಿಸಿಕೊಂಡಿದ್ದಾರೆ. ಈ ಬಗ್ಗೆಯೂ ಪ್ರಧಾನಿ ಮೋದಿ ಚಕಾರವೆತ್ತುತ್ತಿಲ್ಲ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಸುಳ್ಳನ್ನೇ ಜನತೆ ಕೇಳಿದ್ದು, ರೈತರ, ಕೃಷಿಕರ, ಭ್ರಷ್ಟಾಚಾರ,ಕಾರ್ಮಿಕರ ಬಗ್ಗೆ ಮಾತೇ ಎತ್ತುತ್ತಿಲ್ಲ, ಇಂತಹ
ವ್ಯಕ್ತಿಯನ್ನು ಜನತೆ ತಿರಸ್ಕರಿಸಿ ರೈತರ ರಕ್ಷಣೆಯಹೊಣೆ ಹೊತ್ತಿರುವ ಹಾಗೂ ಯುವಕರಿಗೆಉದ್ಯೋಗ ಸೃಷ್ಟಿಸುವ ಮತ್ತು ಪ್ರೀತಿ, ವಿಶ್ವಾಸ,ಸಾಮರಸ್ಯ ಹಾಗೂ ಅಭಿವೃದ್ಧಿ ವಿಚಾರಅಳವಡಿಸಿಕೊಂಡಿರುವ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next