Advertisement

Rahul Gandhi: ರೈತರೊಂದಿಗೆ ಸೇರಿ ಗದ್ದೆ ಉತ್ತು, ನಾಟಿ ಮಾಡಿದ ರಾಹುಲ್ ಗಾಂಧಿ

12:29 PM Jul 08, 2023 | Team Udayavani |

ಸೋಣಿಪತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ರೈತರೊಂದಿಗೆ ಬೆರೆತು ನಾಟಿ ಕಾರ್ಯದಲ್ಲಿ ತೊಡಗಿ ಗಮನ ಸೆಳೆದರು. ಹರ್ಯಾಣದ ಸೋಣಿಪತ್ ನ ಮದಿನಾ ಗ್ರಾಮದಲ್ಲಿ ರಾಹುಲ್ ನಾಟಿ ಮಾಡಿದರು.

Advertisement

ಅವರು ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದಾಗ ಭತ್ತದ ಗದ್ದೆಯೊಂದರ ವಾಹನ ನಿಲ್ಲಿಸಿ ಪ್ಯಾಂಟ್ ಸುತ್ತಿಕೊಂಡು ಅದರೊಳಗೆ ಹೆಜ್ಜೆ ಹಾಕಿದರು.

ಗದ್ದೆಯೊಂದರಲ್ಲಿ ಭತ್ತ ನಾಟಿಯಾಗುತ್ತಿರುವುದನ್ನು ಕಂಡ ಕಾಂಗ್ರೆಸ್‌ ಮುಖಂಡ ರಾಹುಲ್ ಕಾರನ್ನು ನಿಲ್ಲಿಸಿದರು. ಹೊಲಕ್ಕೆ ತೆರಳಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು.

ಅಲ್ಲದೆ ರೈತರೊಂದಿಗೆ ಕೃಷಿ ಕಾರ್ಮಿಕರೊಂದಿಗೆ ಮಾತನಾಡುವುದು ಕಂಡು ಬಂತು.

2024ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್, ದೇಶದ ಹಲೆವೆಡೆ ವಿವಿಧ ಸ್ಥರ ಜನರೊಂದಿಗೆ ಬೆರೆಯುತ್ತಿದ್ದಾರೆ.

Advertisement

ಅವರು ಇತ್ತೀಚೆಗೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಬೈಕ್ ಮೆಕ್ಯಾನಿಕ್ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು. ವರ್ಕ್‌ಶಾಪ್‌ ನಲ್ಲಿ ಮೆಕ್ಯಾನಿಕ್‌ ಗಳೊಂದಿಗೆ ಗಾಂಧಿ ಸಂಭಾಷಣೆ ನಡೆಸಿದರು. ಅಲ್ಲದೆ ಮುರಿದ ಮೋಟಾರ್‌ ಸೈಕಲ್‌ ಗಳನ್ನು ಸರಿಪಡಿಸಲು ಪ್ರಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next