Advertisement

ಬಿಹಾರ ಡಿಸಿಎಂ ಹೂಡಿದ್ದ ಮಾನನಷ್ಟ ದಾವೆ: ರಾಹುಲ್‌ಗೆ ಪಟ್ನಾ ಕೋರ್ಟ್‌ ಬೇಲ್‌

11:59 AM Jul 07, 2019 | Sathish malya |

ಪಟ್ನಾ : ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ಅವರು ದಾಖಲಿಸಿದ್ದ ಮಾನನಷ್ಟ ದಾವೆ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಇಂದು ಶನಿವಾರ ಪಟ್ನಾ ಕೋರ್ಟ್‌ ಜಾಮೀನು ಮಂಜೂರು ಮಾಡಿತು.

Advertisement

“ಎಲ್ಲ ಕಳ್ಳರು ಮೋದಿ ಉಪನಾಮವನ್ನು ಹೊಂದಿರುವುದು ಏಕೆ ?’ ಎಂದು ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆ ವಿರುದ್ಧ ಸುಶೀಲ್‌ ಮೋದಿ ಮಾನನಷ್ಟ ದಾವೆ ಹೂಡಿದ್ದರು.

ಪಟ್ನಾ ಕೋರ್ಟ್‌ ರಾಹುಲ್‌ ಗಾಂಧಿ ಅವರಿಗೆ 10,000 ರೂ.ಗಳ ಎರಡು ಭದ್ರತೆಯ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತು.

ಜಾಮೀನು ಮಂಜೂರಾದ ಬಳಿಕ ರಾಹುಲ್‌ ಗಾಂಧಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ನಾನಿಲ್ಲಿ ಸಂದೇಶವೊಂದನ್ನು ನೀಡುತ್ತಿದ್ದೇನೆ. ಸಿದ್ಧಾಂತದ (ಮೋದಿ) ವಿರುದ್ಧ ನಿಂತವರ ಮೇಲೆ ದಾಳಿ ಮಾಡಲಾಗುತ್ತಿದೆ; ಕೋರ್ಟ್‌ ಕೇಸುಗಳನ್ನು ಹಾಕಲಾಗುತ್ತಿದೆ. ನನ್ನ ಹೋರಾಟವು ಸಂವಿಧಾನದ ರಕ್ಷಣೆಗಾಗಿದೆ; ಅಂಎಯೇ ನಾನು ಬಡವರು ಮತ್ತು ರೈತರ ಪರವಾಗಿದ್ದೇನೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next