Advertisement

ವಿಮೆಗೆ ಹಣ ಸಾಲದು

06:00 AM Sep 29, 2018 | Team Udayavani |

ನವದೆಹಲಿ: ಬಡವರಿಗೆ ನೆರವಾಗುವ ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಯೋಜನೆಗಾಗಿ ಕೇವಲ 2 ಸಾವಿರ ಕೋಟಿ ರೂ. ಮೀಸಲಿಡುವ ಪ್ರಧಾನಿ ನರೇಂದ್ರ ಮೋದಿ, ಉದ್ಯಮಿ ಅನಿಲ್‌ ಅಂಬಾನಿಗೆ 1.30 ಲಕ್ಷ ಕೋಟಿ ರೂ. ನೀಡುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. 50 ಕೋಟಿ ಭಾರತೀಯರಿಗೆ 2 ಸಾವಿರ ಕೋಟಿ ರೂ. ಅಂದರೆ ವ್ಯಕ್ತಿಗೆ 40 ರೂ. ಅನ್ನು ಮೋದಿ ಮೀಸಲಿಟ್ಟಿದ್ದಾರೆ. ಇದು ಲಾಲಿಪಪ್‌ ನೀಡಿದಂತಿದೆ. ಬಡವರಿಗೆ ತೆರೆಯದ ಮೋದಿ ಖಜಾನೆ, ಶ್ರೀಮಂತರಿಗೆ ಮಾತ್ರ ತೆರೆಯುತ್ತದೆ ಎಂದು ಟ್ವಿಟರ್‌ನಲ್ಲಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಅಲ್ಲದೆ ಯುಪಿಎ ಅಧಿಕಾರದಲ್ಲಿದ್ದಾಗ ತೈಲ ಬೆಲೆ ಡಾಲರ್‌ಗೆ 140 ಡಾಲರ್‌ ಇತ್ತು. ಈಗ ಇದು 70 ಡಾಲರ್‌ಗೆ ಕುಸಿದಿದೆ. ಆದರೆ ಪೆಟ್ರೋಲ್‌ ಬೆಲೆ ಏರುತ್ತಲೇ ಇದೆ. ಯಾರ ಕಿಸೆ ಇದರಿಂದ ತುಂಬುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next