Advertisement
ಲಾಕ್ಡೌನ್ ಬಿಸಿ ಸಿಂಗಾಪುರವನ್ನೂ ಬಿಡಲಿಲ್ಲ. ಕೊರೊನಾಕ್ಕೆ ಬೆದರಿದ ಜನ ಮನೆಯೊಳಗೇ ಉಳಿದಾಗ, ಬೀದಿಗಳೆಲ್ಲಾ ಖಾಲಿಯಾದವು. ಜಗತ್ತಿನ ಶಾಪಿಂಗ್ ರಾಜಧಾನಿ ಎನಿಸಿರುವ ಸಿಂಗಾಪುರ, ಬಾಯಿ ಮೇಲೆ ಬೆರಳಿಟ್ಟುಕೊಂಡು ಕುಳಿತಿತು. ಇಂಥ ಸಂದರ್ಭದಲ್ಲೂ, ಅಲ್ಲಿನ ಸೆರಂಗೂನ್ ರಸ್ತೆಯಲ್ಲಿ ಒಂದು ಹೋಟೆಲ್ ಮಾತ್ರ ಬಾಗಿಲು ತೆರೆದಿತ್ತು. ಅದರ ಹೆಸರು- ಎಂ.ಟಿ.ಆರ್! ಕರೆಕ್ಡ್, ಅದರ ಪೂರ್ತಿ ಹೆಸರು, ಮಾವಳ್ಳಿ ಟಿಫನ್ ರೂಂ.
Related Articles
Advertisement
ಈಗ, ಶಾವಿಗೆ ಬಾತ್, ಉಪ್ಪಿಟ್ಟು, ಮಂಗಳೂರು ಬನ್ಸ್, ಉದ್ದಿನವಡೆ, ಇಡ್ಲಿ… ಹೀಗೆ, ಹಲವು ತಿಂಡಿಗಳು ವೈದ್ಯರ ಹೊಟ್ಟೆ ತುಂಬಿಸುತ್ತಿವೆ. ದಿನಕ್ಕೆ ಒಂದುಹೊತ್ತಿಗೆ 200- 300 ಜನ ಈ ಸೇವೆಯ ಲಾಭ ಪಡೆಯುತ್ತಿದ್ದಾರೆ’ ಅಂತಾರೆ ರಾಘವೇಂದ್ರ ಶಾಸ್ತ್ರಿ. ಹಣಕ್ಕಿಂತ ಅಂತಃಕರಣ ಮುಖ್ಯ. ಹಣವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಸಂಪಾದನೆ ಮಾಡಬಹುದು. ಆದರೆ, ಈ ರೀತಿ ಸೇವೆಯ ಭಾಗ್ಯ ದೊರೆಯೋದಿಲ್ಲ, ಅನ್ನೋದು ಅವರ ಅನಿಸಿಕೆ.
ಸಾವಿರಾರು ಜನರ ಹೊಟ್ಟೆ ತುಂಬಿದೆ ಈ ಸೇವೆ ಶುರುವಾಗಿ ಸುಮಾರು ಎರಡು ತಿಂಗಳಾಗುತ್ತಾ ಬಂತು. ತಿಂಡಿ, ಪಾನೀಯ, ಹಣ್ಣುಗಳಿಗೆ ಹೆಚ್ಚುಕಮ್ಮಿ 1ಲಕ್ಷ ಸಿಂಗಪೂರ್ ಡಾಲರ್ (55 ಲಕ್ಷ ರೂ.)ಖರ್ಚಾಗಿದೆ. ವಾರಕ್ಕೆ ನಾಲ್ಕು ದಿನ ನೂರಾರು ನರ್ಸ್ಗಳು, ವೈದ್ಯರ ಹೊಟ್ಟೆ ತುಂಬಿಸುತ್ತಿದೆ ಶಾಸ್ತ್ರಿ ಅಂಡ್ ಟೀಂ. ಸಿಂಗಪೂರ್ ಜನರಲ್ ಹಾಸ್ಪಿಟಲ್, ನ್ಯಾಷನಲ್ ಯೂನಿವರ್ಸಿಟಿ ಹಾಸ್ಪಿಟಲ್, ಟಿಟಿಎಸ್ ಹಾಸ್ಪಿಟಲ್, ವುಡ್ ಲ್ಯಾಂಡ್ ಕಮ್ಯೂನಿಟಿ ಹಾಸ್ಪಿಟಲ್, ಬ್ರೈಟ್ ವಿಷನ್ ಹಾಸ್ಪಿಟಲ್, ಹೀಗೆ… 7 ಆಸ್ಪತ್ರೆಯ ಸಾವಿರಾರು ಸಿಬ್ಬಂದಿಯ ಹೊಟ್ಟೆ ತುಂಬಿಸುವ ಹೊಣೆಯನ್ನು ರಾಘವೇಂದ್ರ ಶಾಸ್ತ್ರಿಗಳೇ ಹೊತ್ತುಕೊಂಡಿದ್ದಾರೆ.
ಈ ತನಕ 10 ಸಾವಿರದಷ್ಟು ಹಣ್ಣುಗಳ ಬ್ಯಾಗ್ ವಿತರಣೆಯಾಗಿದೆ. 8 ಸಾವಿರದಷ್ಟು ಶಾವಿಗೆ ಬಾತ್, ಮೂರು ಸಾವಿರದಷ್ಟು ಖಾರಾಬಾತ್, ನಾಲ್ಕು ಸಾವಿರದಷ್ಟು ಉದ್ದಿನವಡೆ, ಇನ್ನು ಕಾಫಿ, ಟೀ, ಬಾದಾಮಿ ಹಾಲು ಲೆಕ್ಕಕ್ಕೆ ಇಲ್ಲ. ಮಂಗಳವಾರದಿಂದ ಶುಕ್ರವಾರದ ತನಕ, ಅಂದರೆ ವಾರದ ನಾಲ್ಕು ದಿನಗಳು, ಇವರ ಸೇವೆ ಇರುತ್ತದೆ. ತಯಾರಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು 8 ವಾಹನಗಳಿವೆ. 24 ಮಂದಿ ನೌಕರರು ಇದ್ದಾರೆ. ರಾಘವೇಂದ್ರರು ತಮ್ಮ ಪಾಡಿಗೆ ತಾವು ಈ ಸೇವೆ ಮಾಡುತ್ತಿದ್ದರು. ಮೊನ್ನೆಯಷ್ಟೇ,
ಸಿಂಗಾಪುರದ ಭಾರತೀಯ ಹೈ ಕಮಿಷನರ್ ಜಾವೇದ್ ಅಶ್ರಾಫ್, ಎಂ.ಟಿ.ಆರ್.ಗೆ ಭೇಟಿ ಕೊಟ್ಟರು. ಶಾಸ್ತ್ರಿಗಳ ಸೇವೆ ನೋಡಿ, ತಾವೂ ಕೂತು, ಒಂದಷ್ಟು ತಿಂಡಿಗಳನ್ನು ಪ್ಯಾಕ್ ಮಾಡಿದರು. ಅದು ಸುದ್ದಿಯಾದಾಗಲೇ, ಇಡೀ ಸಿಂಗಾಪುರ್ ಶಾಸ್ತ್ರಿಗಳ ಕಡೆ ತಿರುಗಿ, ಒಳ್ಳೆ ಕೆಲ್ಸ ಮಾಡ್ತಾ ಇದ್ದೀರ ಅಂತ ಕಣ್ಣು ಮಿಟುಕಿಸಿದ್ದು. ಮುಂದಿನವಾರ, ಸಿಂಗಾಪುರ್ ಪ್ರಧಾನಿಗಳೂ, ಶಾಸ್ತ್ರಿಯವರ ಹೋಟೆಲಿಗೆ ಬರ್ತಾರಂತೆ. ವೈಮಾನಿಕ ಸಮೀಕ್ಷೆಗಲ್ಲ. ಆಹಾರ ಪೊಟ್ಟಣದ ಪಾರ್ಸೆಲ್ ಕಟ್ಟೋಕೆ ಬರ್ತಾರಂತೆ! ಎಲ್ಲಾ ರಾಘವೇಂದ್ರ ಮಯ.
* ಕಟ್ಟೆ ಗುರುರಾಜ್