Advertisement
ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ತಂಡ ಸದಸ್ಯರು ಈ ನಿಬಂಧನೆಗಳನ್ನು ತೆಗೆದು ಹಾಕುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತದಿಂದ ಒಪ್ಪಂದಕ್ಕೆ ಸಂಬಂಧಿಸಿದ ಹಣವನ್ನು ಫ್ರಾನ್ಸ್ನ ಪೂರೈಕೆದಾರರಿಗೆ ನೀಡಲಾಗುತ್ತದೆಯೇ ವಿನಾ ಫ್ರಾನ್ಸ್ನ ಸರಕಾರಕ್ಕೆ ನೀಡುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರ ತಡೆ ಸಂಬಂಧದ ನಿಬಂಧನೆ ತೆಗೆದುಹಾಕುವುದು ಸರಿಯಲ್ಲ ಎಂದು ಈ ಸದಸ್ಯರು ಟಿಪ್ಪಣಿಯಲ್ಲಿ ನಮೂದಿಸಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ಕಾರಣಕ್ಕೆ ಫ್ರಾನ್ಸ್ ಸರಕಾರ ಕೇವಲ ಲೆಟರ್ ಆಫ್ ಕಂಫರ್ಟ್ ನೀಡಿದ್ದು, ಬ್ಯಾಂಕ್ ಗ್ಯಾರಂಟಿ ಯನ್ನು ನೀಡಿಲ್ಲ. ಲೆಟರ್ ಆಫ್ ಕಂಫರ್ಟ್ ಕಾನೂನು ಬದ್ಧವಲ್ಲ ಎಂದು ವರದಿಯಲ್ಲಿ ವಿವರಿಸ ಲಾಗಿದೆ. ಒಟ್ಟು 8 ನಿಯಮಗಳನ್ನು ಉಲ್ಲಂ ಸಲಾಗಿದ್ದು, ಈ ಪೈಕಿ 2 ನಿಯಮಗಳ ಉಲ್ಲಂಘನೆ ಪ್ರಶ್ನಾರ್ಹ ವಾಗಿದೆ ಎಂದು ವರದಿ ಹೇಳಿದೆ.
ರಫೇಲ್ ಒಪ್ಪಂದದಲ್ಲಿ ಯುಪಿಎ ಮಾಡಿಕೊಂಡಿದ್ದ ನಿಯಮಗಳನ್ನೇ ಎನ್ಡಿಎ ಸರಕಾರ ಅನುಸರಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. 2013ರಲ್ಲಿ ಯುಪಿಎ ಮಾಡಿದ್ದ ನಿಯಮ ಗಳನ್ನು ಅನುಸರಿಸಲಾಗಿದೆ. ಸ್ನೇಹಿ ರಾಷ್ಟ್ರಗಳೊಂದಿಗೆ ಅಂತರ್ ಸರಕಾರಿ ಒಪ್ಪಂದಕ್ಕೆ ಸಹಿ ಹಾಕುವಾಗ ನಿಯಮ ಮೀರಲು ರಕ್ಷಣಾ ಸಚಿವಾಲಯಕ್ಕೆ 2013ರ ಯುಪಿಎ ನೀತಿ ಅವಕಾಶ ನೀಡಿತ್ತು ಎಂದು ವರದಿ ಹೇಳಿದೆ. ಈ ಹಿಂದೆ ಅಮೆರಿಕ ಮತ್ತು ರಷ್ಯಾ ಸರಕಾರದ ಜತೆಗೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆಗಲೂ ಈ ನಿಬಂಧನೆಗಳು ಇರ ಲಿಲ್ಲ. ಹಾಗಾಗಿ ಫ್ರಾನ್ಸ್ ಜತೆಗೆ ರಫೇಲ್ ಒಪ್ಪಂದ ಮಾಡಿಕೊಳ್ಳುವಾ ಗಲೂ ಈ ನಿಬಂಧನೆ ಕೈಬಿಡಲಾಗಿದೆ. ಭಾರತೀಯ ತಂಡ ಈ ಒಪ್ಪಂದವನ್ನು ವಿರೋಧವಿಲ್ಲದೆ ಸಮ್ಮತಿಸಿದೆ.
ಎಸ್.ಬಿ.ಪಿ. ಸಿನ್ಹಾ, ನಿವೃತ್ತ ಏರ್ ಮಾರ್ಷಲ್
Related Articles
ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ
Advertisement
ಲೋಕಪಾಲ ಜಾರಿಗೆ ತಂದಿದ್ದರೆ ರಫೇಲ್ ಒಪ್ಪಂದದಲ್ಲಿ ಪ್ರಮುಖ ಆರೋಪಿಯೇ ಪ್ರಧಾನಿ ಮೋದಿ ಆಗಿರುತ್ತಿದ್ದರು. ಮೋದಿಯ ವಿಶಾಲ ಎದೆಯು ಭ್ರಷ್ಟಾಚಾರದ ಗುಂಡಿನ ದಾಳಿಯ ಎದುರು ನಿಲ್ಲದು. ವೀರಪ್ಪ ಮೊಲಿ, ಮಾಜಿ ಸಚಿವ