Advertisement

ಅಪ್ಪು ಜೊತೆಗಿನ ಫೋಟೋ ಶೇರ್ ಮಾಡಿ ಕಂಬನಿ ಮಿಡಿದ ನಟಿ ರಾಧಿಕಾ ಪಂಡಿತ್

12:29 PM Nov 10, 2021 | Team Udayavani |

ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದು ವಾರ ಕಳೆದಿದೆ. ಆದ್ರೆ ಅಭಿಮಾನಿಗಳ ದುಃಖ ಹಾಗೆಯೇ ಇದೆ. ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಸ್ಮರಣೆ ನಡೆಯುತ್ತಲೇ ಇದೆ. ಪುನೀತ್ ಹೆಸರಲ್ಲಿ ನೇತ್ರದಾನ, ರಕ್ತದಾನದಂತಹ ಮಹತ್ ಕಾರ್ಯಗಳು ಸಾಗುತ್ತಲೇ ಇವೆ. ಬಾರದ ಲೋಕಕ್ಕೆ ತೆರಳಿದ ನಟಸಾರ್ವಭೌಮನನ್ನು ನೆನೆದು ನಟಿ ರಾಧಿಕಾ ಪಂಡಿತ್ ಸೊಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

Advertisement

ಪುನೀತ್ ಜೊತರೆಗಿರುವ ಫೋಟೋವನ್ನು ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್, ಭಾವನಾತ್ಮಕವಾಗಿ ಬರೆದಿದ್ದಾರೆ.  ಅಪ್ಪು ಸರ್ ನೀವಿಲ್ಲ ಎನ್ನುವುದನ್ನು ಹೃದಯ ಒಪ್ಪಿಕೊಳ್ಳುತ್ತಿಲ್ಲ. ನಿಮ್ಮ ಸಾವು ನಮ್ಮ ಚಿತ್ರರಂಗಕ್ಕೆ ತುಂಬಲಾಗದ ನಷ್ಟ.  ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.  ನಿಮ್ಮನ್ನು ಮಿಸ್  ಮಾಡಿಕೊಳ್ಳುತ್ತೇವೆ  ಎಂದು ಬರೆದಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರಿಗೆ ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಅಪ್ಪು ಕೊನೆಯುಸಿರೆಳೆದಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next