Advertisement

ಜಾಗೆ ರಡ್ಡ್ ಎಕ್ರೆ.. ಬೈದೆರ್‌ ಲಪ್ಪೆರೆ..

10:54 PM May 29, 2019 | Sriram |

ನವೀನ್‌ ಡಿ. ಪಡೀಲ್- ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿತ್ತು. ಅದನ್ನು ಡೀಲ್ ಮಾಡುವ ಕಥಾನಕವೇ ‘ರಡ್ಡ್ ಎಕ್ರೆ’.

Advertisement

ವಿಸ್ಮಯ ವಿನಾಯಕ್‌ ಚೊಚ್ಚಲ ನಿರ್ದೇಶನದ ಈ ಸಿನೆಮಾ ಬಗ್ಗೆ ಒಂದೊಂದೇ ಕುತೂಹಲಗಳು ಈಗ ಕೋಸ್ಟಲ್ವುಡ್‌ನ‌ಲ್ಲಿ ಹರಿದಾಡುತ್ತಿವೆ. ‘ಜಾಗೆ ರಡ್ಡ್ ಎಕ್ರೆ.. ಬೈದೆರ್‌ ಲಪ್ಪೆರೆ.. ಜಾಗೆದಕುಲು ಬನ್ನಗ ಮಾತ ಒತ್ತರೆ’ ಎಂಬ ಟೈಟಲ್ ಸಾಂಗ್‌ ಮೂಲಕ ಆರಂಭವಾಗಲಿರುವ ಈ ಸಿನೆಮಾ ಸದ್ಯ ಚರ್ಚಾ ವಿಷಯವೂ ಹೌದು. ಶೂಟಿಂಗ್‌ ಮುಗಿಸಿರುವ ಈ ಸಿನೆಮಾದ ಎಲ್ಲ ಸಿದ್ಧತೆ ಮುಗಿಸಿಕೊಂಡು ಬಿಡುಗಡೆಯ ತವಕದಲ್ಲಿದೆ. ಅರವಿಂದ ಬೋಳಾರ್‌, ಉಮೇಶ್‌ ಮಿಜಾರ್‌, ದೀಪಕ್‌ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಹಲವು ಖ್ಯಾತನಾಮರು ಸಿನೆಮಾದಲ್ಲಿದ್ದಾರೆ.

ತುಳುನಾಡಿನ ಇತರ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಈ ಸಿನೆಮಾ ಕೆಲವೇ ತಿಂಗಳಲ್ಲಿ ರಿಲೀಸ್‌ ಕಾಣಲಿದೆ. ಶಶಿರಾಜ್‌ ಕಾವೂರು ಹಾಗೂ ವಿಸ್ಮಯ ವಿನಾಯಕ್‌ ಸಾಹಿತ್ಯದ ಇದರ ಸಾಂಗ್‌ಗಳು ಕೆಲವೇ ದಿನದಲ್ಲಿ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next