Advertisement

ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಮೂವರ ಸೆರೆ

06:00 AM Dec 01, 2018 | Team Udayavani |

ಹೊನ್ನಾಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಗಡೂರಲ್ಲಿ ಶುಕ್ರವಾರ ಬಂಧಿಸಿ 45.46 ಕ್ವಿಂಟಾಲ್‌ ಅಕ್ಕಿ ವಶಪಡಿಸಿಕೊಂಡಿದ್ದಾರೆ. ರವಿ, ಸಂತೋಷ, ಈಶ್ವರಪ್ಪ ಬಂಧಿತ ಆರೋಪಿಗಳಾಗಿದ್ದು, ಅಕ್ಕಿ ಸಂಗ್ರಹಿಸಿಡಲಾಗಿದ್ದ ಮನೆ ಮಾಲೀಕ ಜಗದೀಶ ಪರಾರಿಯಾಗಿದ್ದಾನೆ. ಆಹಾರ ನಿರೀಕ್ಷಕ ಶಿವಾಜಿ ಅವರ ದೂರಿನನ್ವಯ ಸಿಪಿಐ ಬ್ರಿಜೇಶ್‌ ಮ್ಯಾಥ್ಯೂಸ್‌, ಪಿಎಸ್‌ಐ ಕಾಡದೇವರಮಠ, ಎಎಸ್‌ಐ ಏಕಾಂತಪ್ಪ ನೇತೃತ್ವದ ತಂಡ ದಿಡಗೂರು ಗ್ರಾಮದ ಕೃಷ್ಣಪ್ಪ ನಗರದ ಹೊರ ವಲಯದಲ್ಲಿರುವ ಮನೆ ಮೇಲೆ ದಾಳಿ ನಡೆಸಿದೆ.

Advertisement

ಈ ವೇಳೆ ಅಲ್ಲಿಯೇ ಇದ್ದ ಆರೋಪಿಗಳನ್ನು ಬಂಧಿಸಿ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಮತ್ತೂಬ್ಬ ಆರೋಪಿಗಾಗಿ ಶೋಧ ಮುಂದುವರಿದಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next